Latest

ಒಂದು ವರ್ಷದ ಮಗನನ್ನೇ ಕೊಂದ ತಂದೆಗೆ ಗಲ್ಲುಶಿಕ್ಷೆ

ಪ್ರಗತಿವಾಹಿನಿ ಸುದ್ದಿ; ಗದಗ: ಒಂದುವರೆ ವರ್ಷದ ಕಂದನನ್ನೇ ಕಿಡ್ನ್ಯಾಪ್ ಮಾಡಿ ಹತ್ಯೆ ಮಾಡಿದ್ದ ತಂದೆಗೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಗಲ್ಲುಶಿಕ್ಷೆ ವಿಧಿಸಿರುವ ಘಟನೆ ಗದಗ ಜಿಲ್ಲೆಯಲ್ಲಿ ನಡೆದಿದೆ.

ಅಪರಾಧಿ ರೋಣ ತಾಲೂಕಿನ ಹುಲ್ಲೂರು ಗ್ರಾಮದ ನಿವಾಸಿ ಪ್ರಶಾಂತಗೌಡ ಎಂದು ತಿಳಿದುಬಂದಿದೆ. ಪ್ರೀತಿಯ ಹೆಸರಲ್ಲಿ ಮಹಿಳೆಯನ್ನು ನಂಬಿಸಿ ವಿವಾಹವಾಗಿದ್ದ. ಇಬ್ಬರ ಪ್ರೀತಿ ಸಂಕೇತವಾಗಿ ಮಗ ಹುಟ್ಟಿದ್ದ. ಆದರೆ ಪ್ರಶಾಂತನಿಗೆ ಪತ್ನಿ-ಮಗ ಬೇಕಿರಲಿಲ್ಲ. ಮಹಿಳೆಯನ್ನು ನಂಬಿಸಿ ಪ್ರೀತಿ ಹೆಸರಲ್ಲಿ ದೋಖಾ ಮಾಡಿದ್ದ ಈ ವಿಷಯ ಗೊತ್ತಾಗುತ್ತಿದ್ದಂತೆ ಮಹಿಳೆ ಜೀವನಾಂಶಕ್ಕಾಗಿ ಕೋರ್ಟ್ ಮೆಟ್ಟಿಲೇರಿದ್ದಳು.

Home add -Advt

ಇದರಿಂದ ಪ್ರಶಾಂತ್ ಗೌಡ ತನ್ನ ಸ್ವಂತ ಮಗನನ್ನೇ 2015ರಲ್ಲಿ ಅಪಹರಿಸಿ ಗಜೇಂದ್ರಗಡ ಪಟ್ಟಣದ ಕಾಲಕಾಲೇಶ್ವರ ಗುಡ್ಡಕ್ಕೆ ಕರೆದುಕೊಂಡು ಹೋಗಿ ಕತ್ತುಹಿಸುಕಿ ಕೊಲೆ ಮಾಡಿದ್ದನಲ್ಲದೇ ಮಗನ ಮೃತದೇಹವನ್ನು ಸುಟ್ಟುಹಾಕಿದ್ದ. ಗಜೇಂದ್ರಗಡ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣ ಸಂಬಂಧ ಇದೀಗ ನ್ಯಾಯಾಲಯ ತೀರ್ಪು ನೀಡಿದ್ದು, ಅಪರಾಧಿಗೆ ಮರಣದಂಡನೆ ವಿಧಿಸಿದೆ.

Related Articles

Back to top button