Latest
ಕಾಲುವೆಗೆ ಉರುಳಿದ ಬಸ್; 32 ಪ್ರಯಾಣಿಕರು ದುರಂತ ಅಂತ್ಯ

ಪ್ರಗತಿವಾಹಿನಿ ಸುದ್ದಿ; ಭೋಪಾಲ್: ಪ್ರಯಾಣಿಕರ ಬಸ್ ಕಾಲುವೆಗೆ ಉರುಳಿದ ಪರಿಣಾಮ 32 ಜನರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಮಧ್ಯಪ್ರದೇಶದ ಪಟ್ನಾ ಗ್ರಾಮದಲ್ಲಿ ನಡೆದಿದೆ.
ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ಬಸ್ ತುಂಬಿ ಹರಿಯುತ್ತಿದ್ದ ಕಾಲುಗೆ ಉರುಳಿಬಿದ್ದಿದೆ. ಬಸ್ ನಲ್ಲಿ 54 ಪ್ರಯಾಣಿಕರಿದ್ದರು. 32 ಪ್ರಯಾಣಿಕರು ಜಲಸಮಾಧಿಯಾಗಿದ್ದು, 18ಕ್ಕೂ ಹೆಚ್ಚು ಮೃತ ದೇಹಗಳನ್ನು ಹೊರ ತೆಗೆಯಲಾಗಿದೆ.
ಇನ್ನೂ ಹಲವರು ಮುಳುಗಿರುವ ಬಸ್ ನಲ್ಲಿಯೇ ಸಿಲುಕಿಕೊಂಡಿದ್ದು, ರಕ್ಷಣಾ ಕಾರ್ಯಾಚರಣೆ ಬರದಿಂದ ಸಾಗಿದೆ.




