Kannada NewsKarnataka NewsLatest

*ನಾಲೆಗೆ ಬಿದ್ದು ಒಂದೇ ಕುಟುಂಬದ ಮೂವರು ದುರ್ಮರಣ*

ಪ್ರಗತಿವಾಹಿನಿ ಸುದ್ದಿ; ಮೈಸೂರು: ನಾಲೆಗೆ ಬಿದ್ದು ಒಂದೇ ಕುಟುಂಬದ ಮೂವರು ಸಾವನ್ನಪ್ಪಿರುವ ಘಟನೆ ಮೈಸೂರು ಜಿಲ್ಲೆಯ ಹೆಚ್.ಡಿ.ಕೋಟೆ ತಾಲೂಕಿನ ಚಂಗೌಡನಹಳ್ಳಿಯಲ್ಲಿ ನಡೆದಿದೆ.

ಮಹಮ್ಮದ್ ಕಪಿಲ್ (40) ಶಾವರ ಭಾನು (35) ಹಗೂ ಶಾಹಿರಾ ಬಾನು (20) ಮೃತರು. ಅಜ್ಜಿಯ ಕಾರ್ಯ ಮುಗಿಸಿ ಶಾಹಿರಾ ಬಾನು ನಗು ಜಲಾಶಯದ ಬಲದಂಡೆ ನಾಲೆಗೆ ಕೈ ತೊಳೆಯಲು ಹೋಗಿದ್ದಾಳೆ. ಈ ವೇಳೆ ಕಾಲು ಜಾರಿ ನಾಲೆಗೆ ಬಿದ್ದಿದ್ದಾಳೆ.

Home add -Advt

ಆಕೆಯನ್ನು ರಕ್ಷಸಲು ಹೋದ ತಂದೆ-ತಾಯಿ ಕೂಡ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಆಗಮಿಸಿದ ಅಗ್ನಿಶಮಕ ಸಿಬ್ಬಂದಿ, ಪೊಲೀಸರು ನಾಲೆಯಿಂದ ಮೂವರ ಮೃತದೇಹವನ್ನು ಹೊರತೆಗೆದಿದ್ದಾರೆ.

ಸರಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ್ ದಾಖಲಾಗಿದೆ.


Related Articles

Back to top button