Politics

*ಡಿನೋಟಿಫಿಕೇಷನ್ ಪ್ರಕರಣ: ಬಿಎಸ್ ವೈ, ಹೆಚ್.ಡಿ.ಕೆ ವಿರುದ್ಧ ದಾಖಲೆ ಬಿಡುಗಡೆ ಮಾಡಿದ ಸಚಿವರು*

ಪ್ರಗತಿವಾಹಿನಿ ಸುದ್ದಿ: ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹಾಗೂ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿರುದ್ಧದ ಅಕ್ರಮ ಡಿನೋಟಿಫಿಕೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಸಚಿವರು ದಾಖಲೆ ಬಿಡುಗಡೆ ಮಾಡಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿದ ಸಚಿವ ಕೃಷ್ಣಬೈರೇಗೌಡ ಹಾಗೂ ದಿನೇಶ್ ಗುಂಡೂರಾವ್, ಯಡಿಯೂರಪ್ಪ ಹಾಗೂ ಕುಮಾರಸ್ವಾಮಿ ವಿರುದ್ಧದ ಡಿನೋಟಿಫಿಕೇಷನ್ ಪ್ರಕರಣ ಕುರಿತು ದಾಖಲೆ ಬಿಡುಗಡೆ ಮಾಡಿದರು.

ಈ ವೇಳೆ ಮಾತನಾಡಿದ ಸಚಿವ ಕೃಷ್ಣಬೈರೇಗೌಡ, ರಾಜ್ಯಪಾಲರು ಕೆಲ ಪ್ರಕರಣಗಳ ತನಿಖೆಗೆ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡುವಲ್ಲಿ ವಿಳಂಬ ಮಾಡುತ್ತಿದ್ದಾರೆ. ತಪ್ಪು ಮಾಡಿದವರಿಗೆ ರಾಜ್ಯಪಾಲರು ರಕ್ಷಣೆ ನೀಡುತ್ತಿದ್ದಾರೆ. ಇಬ್ಬರು ಮಾಜಿ ಸಿಎಂ ಗಳು ಮಾಡಿರುವ ಹಗರಣ ಒಂದೆರಡಲ್ಲ. ಹಲವು ದಾಖಲೆಗಳು ಇದ್ದು, ಅವುಗಳಲ್ಲಿ ಅಕ್ರಮ ಡಿನೋಟಿಫಿಕೇಷನ್ ಪ್ರಕರಣಗಳ ದಾಖಲೆ ಇದಾಗಿದೆ ಎಂದರು.

ಸಚಿವ ದಿನೇಶ್ ಗುಂಡೂರಾವ್ ಮಾತನಾಡಿ, ಕುಮಾರಸ್ವಾಮಿ ‌ಈ‌ನಡುವೆ ಬಹಳ ಮಾತನಾಡುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರ ಬಗ್ಗೆ ಸಾಕಷ್ಟು ಆರೋಪ‌ಮಾಡುತ್ತಿದ್ದಾರೆ. ಮೈಸೂರಿನ ಸೈಟ್ ಬಗ್ಗೆ ಆರೋಪ ಮಾಡಿದ್ದಾರೆ. ಯಾವುದೇ ದಾಖಲೆ‌ ಇಲ್ಲಿಯವರೆಗೆ ನೀಡಿಲ್ಲ. ಬರಿ ಹಿಟ್ ಆ್ಯಂಡ್ ರನ್ ಮಾಡುತ್ತಿದ್ದಾರೆ. ನಾವು ಮಾಡಿದ ಆರೋಪಗಳಿಗೆ ಈಗ ಕುಮಾರಸ್ವಾಮಿ ಉತ್ತರ ನೀಡಬೇಕು ಎಂದರು.

ರಾಜಶೇಖರಯ್ಯ ಈ ಆಸ್ತಿಗೆ ಏನು ಸಂಬಂಧ..? ನೀವು ಸಿಎಂ ಆಗಿದ್ದ‌ ಕೊನೆಯ ದಿನದಲ್ಲಿ ಏನೆಲ್ಲ ‌ಮಾಡಿದ್ರಿ? ಮೂಲ ಮಾಲೀಕರು ನಿಮ್ಮ ಅತ್ತೆ, ಬಾಮೈದಗೆ ರಿಜಿಸ್ಟರ್ ಮಾಡಿಕೊಟ್ರಾ..? ಈಗ ಚೆನ್ನಪ್ಪನವರಿಗೆ ಆಸ್ತಿ ಮಾರಾಟ ಮಾಡಿದ್ದು ನಿಜವಾ ಸುಳ್ಳಾ..? ಕೇವಲ 60 ಲಕ್ಷ ರೂಪಾಯಿಗೆ ಜಮೀನು ಖರೀದಿ ಆಗಿದೆ. ಈ ಪ್ರಕರಣದಲ್ಲಿ ಯಡಿಯೂರಪ್ಪ ಶಾಮೀಲಾಗಿದ್ದಾರೆ. ಅಧಿಕಾರಿಗಳು ಹೇಳಿದ‌ ಮೇಲೂ ಯಡಿಯೂರಪ್ಪ ಕೇಳಿಲ್ಲ. ಭೂಸ್ವಾದಿನದಿಂದ ಹೇಗೆ ಯಡಿಯೂರಪ್ಪ ಕೈಬಿಟ್ರು? ಇವರಿಬ್ಬರ ನಡುವೇ ಏನು ಒಳ ಒಪ್ಪಂದ ಇದೆ? ಇವತ್ತು ಆಸ್ತಿಯ ಬೆಲೆ ‌ನೂರು ಕೋಟಿ‌ಮೇಲೆ ಬೆಲೆ ಬಾಳುತ್ತೆ ಅದನ್ನು ಕೇವಲ 60 ಲಕ್ಷಕ್ಕೆ ಲಪಟಾಯಿಸಿದ್ದೀರಾ. ಸರ್ಕಾರದ ಆಸ್ತಿ ಲಪಟಾಯಿಸಿದ್ದೀರಾ. ಕುಮಾರಸ್ವಾಮಿ ಅತ್ತೆ 60 ಲಕ್ಷಕ್ಕೆ ಭೂಮಿ ಹೇಗೆ ಖರೀದಿಸಿದರು? ಇದು ಯಾವುದೋ ಹಳೆ ಪ್ರಕರಣವಲ್ಲ, ಹಾಲಿ ಪ್ರಕರಣ ಎಂದು ವಾಗ್ದಾಳಿ ನಡೆಸಿದರು.


ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button