Kannada NewsKarnataka NewsLatestPolitics

*ಮಾಜಿ ಸಚಿವರ ಗನ್ ಮ್ಯಾನ್ ನಿಂದ ವಂಚನೆ; FIR ದಾಖಲು*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಮಾಜಿ ಸಚಿವ ಹಾಲಪ್ಪ ಆಚಾರ್ ಗನ್ ಮ್ಯಾನ್ ವಂಚಸಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು, ಗನ್ ಮ್ಯಾನ್ ವಿರುದ್ಧ ವಿಧನಸೌಧ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ.

ಮಾಯಕೊಂಡ ಗ್ರಾಮ ಪಂಚಾಯಿತಿ ಟೆಂಡರ್ ಕೊಡಿಸುತ್ತೇನೆ ಗನ್ ಮ್ಯಾನ್ ರಾಘವೇಂದ್ರ, 30 ಕೋಟಿ ವೆಚ್ಚದ ಕಾಮಗಾರಿ ಹಣ ಪಡೆದು ವಂಚಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. 30 ಕೋಟಿ ವೆಚ್ಚದ ಕಾಮಗಾರಿಗೆ 12% ಕಮಿಷನ್ ಕೇಳಿದ್ದು, ಅಡ್ವಾನ್ಸ್ ಕೊಡಿ ಎಂದು ಹೆಚ್.ರಾಜು ನಾಯ್ಕ್ ಎಂಬುವವರಿಂದ 10 ಲಕ್ಷ ರೂಪಾಯಿ ಪಡೆದುಕೊಂಡಿದ್ದಾರೆ. ಬಳಿಕ ಟೆಂಡರ್ ಕೊಡದೇ ಸತಾಯಿಸಿದ್ದಾನೆ.

ಹೆಚ್.ರಾಜು, ಹಣ ವಾಪಸ್ ಕೊಡುವಂತೆ ಗನ್ ಮ್ಯಾನ್ ಗೆ ಕೇಳಿದ್ದಾರೆ. ಈ ವೇಳೆ 4 ಲಕ್ಷ ರೂಪಾಯಿ ಮಾತ್ರ ವಾಪಸ್ ಕೊಟ್ಟು, ಇನ್ನುಳಿದ 6 ಲಕ್ಷ ರೂಪಾಯಿ ವಂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ವಿಧಾನಸೌಧ ಠಾಣೆಯಲ್ಲಿ ಹಾಲಪ್ಪ ಆಚಾರ್ ಗನ್ ಮ್ಯಾನ್ ರಾಘವೇಂದ್ರ ವಿರುದ್ಧ ಹೆಚ್.ರಾಜು ದೂರು ನೀಡಿದ್ದರು. ದೂರಿನನ್ವಯ ಎಫ್ಐಆರ್ ದಾಖಲಾಗಿದೆ.


ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button