Belagavi NewsBelgaum NewsKannada NewsKarnataka NewsLatest

*ಅಹೋರಾತ್ರಿ ಹನುಮಾನ್ ಚಾಲೀಸಾ ಪಠಣ ಕಾರ್ಯಕ್ರಮಕ್ಕೆ ಚಾಲನೆ*

ಪ್ರಗತಿವಾಹಿನಿ ಸುದ್ದಿ:

ಅಖಂಡ ಅಹೋರಾತ್ರಿ ಹನುಮಾನ ಚಾಲೀಸಾ ಪಠಣ ಕಾರ್ಯಕ್ರಮಕ್ಕೆ ಇಂದು ಮುಂಜಾನೆ 8:30ಕ್ಕೆ ಸಮರಸತಾಭವನದಲ್ಲಿ ವಿದ್ಯುಕ್ತವಾಗಿ ಹನುಮಾನ ಚಾಲೀಸಾ ಪರಿವಾರ ಮತ್ತು ರಾಮಭಕ್ತರ ಸಮ್ಮುಖದಲ್ಲಿ ಚಾಲನೆ ನೀಡಲಾಯಿತು.

ಕಾರ್ಯಕ್ರಮದ ಗೌರವಾಧ್ಯಕ್ಷರಾದ ಮುನಿಸ್ವಾಮಿ ಭಂಡಾರಿ, ಮಾತನಾಡಿ ಕಳೆದ 500ವರ್ಷಗಳ ನಂತರ ಈ ಸಂಭ್ರಮದಲ್ಲಿ ಎಲ್ಲರೂ ಸೇರಿ ಆಚರಿಸಲು ಅವಕಾಶಸಿಕ್ಕಿದೆ. ರಾಮ ಭಕ್ತ ಹನುಮಂತನ ಆರಾಧನೆ ಮಾಡುವ ಮೂಲಕ ಆಧ್ಯಾತ್ಮ ಸಾಧನೆ ಮಾಡಲು ಅಖಂಡ ಹನುಮಾನ ಚಾಲೀಸಾ ಒಂದು ಅವಕಾಶ. ಪ್ರತಿ ಮನೆಯ ಪ್ರತಿ ವ್ಯಕ್ತಿ ಇದರಲ್ಲಿ ಭಾಗವಹಿಸಿ ಸಾಧಕರಾಗೋಣ. ಸ್ವತಃ ನಮ್ಮ ಕುಟಂಬ ಪ್ರತಿನಿತ್ಯ ಭಾಗವಹಿಸುತ್ತದೆ. ಎಲ್ಲರೂ ಭಾಗವಹಿಸಿ ಹನುಮಾನ ಚಾಲೀಸಾ ಪಠಣ ಮಾಡೋಣ ಎಂದು ಕರೆ ನೀಡಿದರು.

ಜನವರಿ 22ರಂದು ಅಯೋಧ್ಯೆಯಲ್ಲಿ ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆಯ ನಿಮಿತ್ತ ಮಾಡುವ ಈ ಭಕ್ತಿಯ ಪಠಣ ಪ್ರಭು ಶ್ರೀರಾಮನ ಚರಣಕ್ಕೆ ಅರ್ಪಿಸಲು ಹೆಚ್ಚು ಜನರು ತಮಗೆ ಅನುಕೂಲ ಆದ ಸಮಯ ಹೆಸರು ನೊಂದಾಯಿಸಿ ಹಗಲು ರಾತ್ರಿ ನಿರಂತರ ಹನುಮಾನ ಚಾಲೀಸಾ ಪಠಣ ಮಾಡಿ ಎಂದರು.

ಎಲ್ಲರನ್ನು ಸ್ವಾಗತಿಸುತ್ತ ಪ್ರಾಸ್ತಾವಿಕ ಮಾತನಾಡಿದ ಕೃಷ್ಣ ಭಟ್ ನಾವು ಎದುರು ನೋಡುತ್ತಿರುವ ಭವ್ಯ ರಾಮಮಂದಿರದ ನೇತೃತ್ವ ವಹಿಸಿದ ಅಶೋಕ ಸಿಂಘಾಜಿಯವರು ವಿಶ್ವ ಹಿಂದುಪರಿಷತ್ ಕಾರ್ಯಲಯ ಸಮರಸತಾಭವನ ಉದ್ಘಾಟಿಸಿದ್ದಾರೆ. ಬೆಳಗಾವಿಯ ಹಿರಿಯ ಪ್ರಚಾರಕರಾದ ಸದಾನಂದಜೀ ಕಾಕಡೆ ಮತ್ತು ಬಾಬುರಾವ ದೇಸಾಯಿಯವರ ಕನಸು ಈ ಭವನ. ಹಾಗಾಗಿ ಅವರೆಲ್ಲ ಅಯೋಧ್ಯೆಯ ಹೋರಾಟದಲ್ಲಿ ಅಶೋಕ ಸಿಂಘಾಜಿಯವರಿಗೆ ಹೆಗಲಿಗೆ ಹೆಗಲು ಕೊಟ್ಟು ಪರಿಶ್ರಮ ಪಟ್ಟ ಕಾರಣ ಲಕ್ಷಾವದಿ ಜನರ ಬಲಿದಾನ ತ್ಯಾಗದಿಂದ ಭವ್ಯ ರಾಮಮಂದಿರ ಆಗುತ್ತಿರುವ ಈ ಶುಭ ಸಂದರ್ಭದಲ್ಲಿ ಸಮಾಜದ ಎಲ್ಲ ಬಂದು ಬಗಿನಿಯರು, ತಾಯಿಂದಿರು ಸಮರಸತಾಭವನದಲ್ಲಿ ನಡೆಯುವ ಅಖಂಡ ಹನುಮಾನ ಚಾಲೀಸಾ ಪಠಣ ಮಾಡುವ ಮೂಲಕ ಪ್ರಭು ಶ್ರೀರಾಮನ ಚರಣಕ್ಕೆ ಸಮರ್ಪಿಸುವ ಈ ಪುಣ್ಯ ಯಜ್ಞದಲ್ಲಿ ಪ್ರತಿ ಮನೆಯ ಪ್ರತಿ ವ್ಯಕ್ತಿ ಭಾಗವಹಿಸುವಂತೆ ವಿನಂತಿಸಿದರು.

ಜೇಠಾಬಾಯಿ ಪಟೇಲ ಹನುಮಾನ ಚಾಲೀಸಾ ಸೇವಾ ಪರಿವಾರದ ಅಧ್ಯಕ್ಷರು, ಮೇಯರ್ ಶೋಭಾ ಸೋಮನ್ನಾಚೆ, ರಾಜಶೇಖರ ಪಾಟೀಲ ಉಪಾಧ್ಯಕ್ಷರು, ರಾಮ ಭಂಡಾರಿ ಉಪಾಧ್ಯಕ್ಷರು, ರಾಮಜಮ್ನಾನಿ ಉಪಾಧ್ಯಕ್ಷರು, ರಾಜೇಶ್ವರಿ ಸಂಬರಗೀಮಠ, ಸಂತೋಷ ವಾದ್ವಾ, ಬಿಪಿನಬಾಯಿ ಪಟೇಲ,ಡಾ ಸುಭಾಷ ಪಾಟೀಲ, ಶ್ರೀಕಾಂತ ಕದಮ್, ರೋಹಿತ ರಾವಲ,ಮಹೇಶ ಪೋರವಾಲ,ಸತೀಶ ಬಾಚೀಕರ, ದಿನೇಶ ಪಾಟೀಲ, ಆನಂದ ಕರಲಿಂಗಣ್ಣವರ, ಗಣೇಶ ಚೌಗಲೆ, ನಾಗೇಶ ಕಾಂಬಳೆ, ರಾಘವೇಂದ್ರ ಕಟ್ಟಿ, ನೂರಾರು ರಾಮ ಭಕ್ತರು ಬಾಗವಹಿಸಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button