Kannada NewsKarnataka News

*ಅಪಹರಣ ಮಾಡಿ ಹಣ ಸುಲಿಗೆ ಮಾಡಿದ್ದ 7 ಜನರ ಬಂಧನ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:  ಮುರಗೋಡ ಠಾಣೆಯಲ್ಲಿ ಒಂದು ವಾರದ ಹಿಂದೆ ದಾಖಲಾದ ವ್ಯಾಪರಿಯೊಬ್ಬರನ್ನು ಅಪಹರಿಸಿ ಜೀವ ಬೆದರಿಕೆ ಹಾಕಿ ಒಂದು ಲಕ್ಷ ನಗದು ಹಣವನ್ನು ಸುಲಿಗೆ ಮಾಡಿದ ಪ್ರಕರಣದಲ್ಲಿ ಮುರಗೋಡ ಪೊಲೀಸರು ಸುಲಿಗೆಕೊರರನ್ನು ಪತ್ತೆ ಹಚ್ಚಿ 7 ಜನರನ್ನು ಬಂಧಿಸಿದ್ದಾರೆ.
ಅವರಿಂದ 60,000/- ರೂ ನಗದು ಹಣ, ಒಂದು ಚಾಕು, 6 ಮೊಬೈಲ್ ಮತ್ತು 5 ಲಕ್ಷ ಕಿಮ್ಮತ್ತಿನ ಒಂದು ಕಾರನ್ನು ವಶಪಡಿಸಿಕೊಂಡಿದ್ದಾರೆ.
ಪ್ರಕರಣವನ್ನು ರಾಮದುರ್ಗ ಡಿ.ಎಸ್.ಪಿ ರಾಮನಗೌಡ ಹಟ್ಟಿ ನೇತೃತ್ವದಲ್ಲಿ ಮುರಗೋಡ ಠಾಣೆಯ ಪಿ.ಐ ಮೌನೇಶ್ವರ ಮಾಲಿ ಪಾಟೀಲ, ಪ್ರೋ. ಪಿಎಸ್‌ಐ ಬಸಗೌಡ ನೇರ್ಲಿ, ಲಕ್ಷ್ಮೀ ಬಿರಾದಾರ ಹಾಗೂ ಸಿಬ್ಬಂದಿ ಜನರಾದ ಕೆ.ಬಿ ಅಲಗರಾವುತ, ಎಮ್.ಬಿ ಸಣ್ಣನಾಯ್ಕ, ಎಚ್.ಆರ್ ನ್ಯಾಮಗೌಡ್ರ, ಎಮ್.ಎಸ್ ಅವರಾದಿ, ರಮೇಶ ಸಸಾಲಟ್ಟಿ, ವಿಠಲ ಮುರಗೋಡ ಮತ್ತು ಅಬ್ಬಾಸ ಗೋಕಾಕ ಇವರ ತಂಡ ಪತ್ತೆ ಮಾಡಿದ್ದು ಈ ತಂಡದಲ್ಲಿ ಇರುವ ಅಧಿಕಾರಿಗಳಿಗೆ ಹಾಗೂ ಎಲ್ಲ ಸಿಬ್ಬಂದಿ ಕಾರ್ಯ ವೈಖರಿ ಬಗ್ಗೆ ಎಸ್.ಪಿ  ಮತ್ತು ಹೆಚ್ಚುವರಿ ಎಸ್.ಪಿ ಪ್ರಶಂಸೆ ವ್ಯಕ್ತ ಮಾಡಿದ್ದಾರೆ.
https://pragati.taskdun.com/4-year-old-boy-sufferd-from-unidentifide-dieses/

Related Articles

Back to top button