Belagavi NewsBelgaum NewsKannada NewsKarnataka NewsLatestUncategorized

*ಸಮಾಜದಲ್ಲಿ ಶಾಂತಿ ನೆಲೆಸಲು ಪ್ರಮುಖ ಪಾತ್ರವಹಿಸಿದ್ದ ಜೈನಮುನಿ ಹತ್ಯೆ ಖಂಡನೀಯ; ನಿಡಸೋಸಿ ಜಗದ್ಗುರು*

ಪ್ರಗತಿವಾಹಿನಿ ಸುದ್ದಿ; ಸಂಕೇಶ್ವರ: ಸಮಾಜದಲ್ಲಿ ಶಾಂತಿ ನೆಲೆಸುವಲ್ಲಿ ಮಠಾಧೀಶರು ಹಾಗೂ ಮುನಿಗಳ ಪಾತ್ರ ಮಹತ್ವದ್ದಾಗಿದ್ದು, ಹಿರೆಕೂಡಿ ಜೈನ ಮುನಿಗಳ ಹತ್ಯೆ ಸಮಾಜದಲ್ಲಿ ಅಶಾಂತಿಯ ವಾತಾವರಣ ನಿರ್ಮಾಣ ಮಾಡಿದೆ ಎಂದು ನಿಡಸೋಸಿ ಜಗದ್ಗುರು ಪಂಚಮ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಬೇಸರ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಅವರು,ಹಿರೆಕೂಡಿ ಗ್ರಾಮದ ನಂದಿ ಪರ್ವತ ಆಶ್ರಮದ ೧೦೮ ಕಾಮಕುಮಾರ ನಂದಿ ಮಹಾರಾಜರನ್ನು ಹತ್ಯೆ ಮಾಡಿರುವುದು ನೋವು ತಂದಿದೆ. ಜೈನ ಸಮುದಾಯ ಈ ಮಹಾರಾಜರು ಭಕ್ತ ಸಮುದಾಯಕ್ಕೆ ಉತ್ತಮ ಮಾರ್ಗ ತೋರಿದ್ದರು. ಇಂತಹ ಮುನಿ ಮಹಾರಾಜರ ಜೊತೆ ಯಾವುದೇ ವ್ಯವಹಾರಗಳಿದ್ದರೂ ಸಮಾಜದ ಹಿರಿಯರ ಜೊತೆಗೆ ಚರ್ಚಿಸಿ ಬಗೆಹರಿಸಬಹುದಿತ್ತು. ಈ ವ್ಯವಹಾರ ಹತ್ಯೆಯ ರೂಪ ಪಡೆದಿರುವುದು ಸಮಾಜ ತಲೆತಗ್ಗಿಸುವ ವಿಚಾರವಾಗಿದೆ ಎಂದರು.

ಇಂತಹ ಘಟನೆಗಳು ಸಮಾಜದ ದಾರಿತಪ್ಪಿಸುವ ಸಂದೇಶಗಳಿಗೆ ಕಾರಣವಾಗುತ್ತವೆ. ಯಾವುದೇ ಸಮಸ್ಯೆಗಳಿದ್ದರೂ ಪರಸ್ಪರ ಬಗೆಹರಿಸಿಕೊಳ್ಳುವಂತಹ ಸನ್ನಿವೇಶಗಳು ಭವಿಷ್ಯದ ಬದುಕಲ್ಲಿ ಬದಲಾವಣೆ ತರುತ್ತವೆ. ಅಲ್ಲದೇ ಇಂತಹ ಕೃತ್ಯಗಳನ್ನು ಎಲ್ಲ ಧರ್ಮಿಯರು ಖಂಡಿಸುತ್ತೇವೆ ಎಂದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button