Kannada NewsKarnataka NewsLatest

*ಯುವ ಬ್ರಿಗೇಡ್ ಕಾರ್ಯಕರ್ತನ ಬರ್ಬರ ಹತ್ಯೆ; 6 ಆರೋಪಿಗಳ ವಿರುದ್ಧ FIR ದಾಖಲು*

ಪ್ರಗತಿವಾಹಿನಿ ಸುದ್ದಿ; ಮೈಸೂರು: ಕ್ಷುಲ್ಲಕ ಕಾರಣಕ್ಕೆ ಆರಂಭವಾದ ಘಟನೆ ಯುವ ಬ್ರಿಗೇಡ್ ಕಾರ್ಯಕರ್ತನ ಬರರ ಹತ್ಯೆಯಲ್ಲಿ ಕೊನೆಯಾಗಿದೆ.

ಮೈಸೂರಿನ ಟಿ.ನರಸಿಪುರ ಪಟ್ಟನದ ಹೊರವಲಯದಲ್ಲಿ ಈ ಘಟನೆ ನಡೆದಿದೆ. ವೇಣುಗೋಪಾಲ ನಾಯಕ್ (32) ಮೃತ ಕಾರ್ಯಕರ್ತ. ಟಿ.ನರಸಿಪುರದ ಶ್ರೀರಾಂಪುರ ನಿವಾಸಿ.

ಹನುಮಜಯಂತಿಯಂದು ಗುಂಪು ಘರ್ಷಣೆ ನಡೆದು, ವಾಗ್ವಾದ ತಾರಕ್ಕೇರಿದೆ. ಈ ವೇಳೆ ವೇಣುಗೋಪಾಲ್ ನನ್ನು ದುಷ್ಕರ್ಮಿಗಳು ಹತ್ಯೆಮಾಡಿ ಪರರೈಯಾಗಿದ್ದಾರೆ ಎಂದು ತಿಳಿದುಬಂದಿದೆ.

ಇದೀಗ ಪ್ರಕರಣ ಸಂಬಂಧ, 6 ಆರೋಪಿಗಳ ವಿರುದ್ಧ ಟಿ.ನರಸಿಪುರ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ. ಟಿ.ನರಸಿಪುರ ನಿವಾಸಿಗಳಾದ ಮಣಿಕಂಠ, ಸಂದೇಶ್, ಶಂಕರೇಗೌಡ, ಅನಿಲ್, ಮಂಜು ಹಾಗೂ ಹ್ಯಾರಿಸ್ ವಿರುದ್ಧ ಎಫ್ ಐ ಆರ್ ದಾಖಲಾಗಿದ್ದು, ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button