Latest

ಚಲಿಸುತ್ತಿದ್ದ ಬಸ್ ನಲ್ಲೇ ಹೃದಯಾಘಾತ; ಕೆ.ಎಸ್.ಆರ್.ಟಿ ಬಸ್ ಕಂಡಕ್ಟರ್ ಸಾವು

ಪ್ರಗತಿವಾಹಿನಿ ಸುದ್ದಿ; ಚಿಕ್ಕಮಗಳೂರು: ಕೆ.ಎಸ್.ಆರ್.ಟಿ.ಸಿ ಬಸ್ ನಿರ್ವಾಹಕರೊಬ್ಬರು ಹೃದಯಾಘಾತದಿಂದ ಮೃತಪಟ್ಟ ಘಟನೆ ಚಿಕ್ಕಮಗಳೂರಿನ ಮುಡಿಗೆರೆ ತಾಲೂಕು ಮಲಯಮಾಋತ ಬಳಿ ನಡೆದಿದೆ.

ವಿಜಯ್ (43) ಹೃದಯಾಘಾತದಿಂದ ಮೃತಪಟ್ಟ ಕಂಡಕ್ಟರ್. ಚಿಕ್ಕಮಗಳೂರು-ಉಡುಪಿ ಕೆ.ಎಸ್.ಆರ್.ಟಿ.ಸಿ ಬಸ್ ನಿರ್ವಾಹಕರಾಗಿ ಕಾರ್ಯನಿರ್ವಹಿಸುತ್ತಿದ್ದ ವಿಜಯ್ ಗೆ ಇಂದು ಬೆಳಿಗ್ಗೆ ಇದ್ದಕ್ಕಿದ್ದಂತೆ ಬಸ್ ನಲ್ಲಿಯೇ ಎದೆನೋವು ಕಾಣಿಸಿಕೊಂಡಿದೆ.

ಬಸ್ ಉಡುಪಿ ಕಡೆಗೆ ಹೊರಟಿತ್ತು. ಮಾರ್ಗ ಮಧ್ಯೆಯೇ ಎದೆನೋವು ಕಾಣಿಸಿಕೊಂಡು ನಿರ್ವಾಹಕ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಮೆಡಿಕಲ್ ಕಾಲೇಜಿನ 33 ಜನರಿಗೆ ಕೊರೊನಾ ಸೋಂಕು

Home add -Advt

Related Articles

Back to top button