National

*ದಿಢೀರ್ ಪ್ರವಾಹದಿಂದ ದುರಂತ: ನದಿ ದಾಟುತ್ತಿದ್ದ ಐವರು ಯೋಧರು ಸಾವು*

ಪ್ರಗತಿವಾಹಿನಿ ಸುದ್ದಿ: ಎಲ್ ಎಸಿ ಬಳಿ ನದಿಯಲ್ಲಿ ಏಕಏಕಿ ಪ್ರವಾಹ ಸಂಭವಿಸಿದ ಪರಿಣಾಮ ನದಿ ದಾಟುತ್ತಿದ್ದ ಐವರು ಯೋಧರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಲಡಾಖ್ ನ ನೋಮಾ-ಚುಶುಲ್ ಪ್ರದೇಶದಲ್ಲಿ ನಡೆದಿದೆ.

ಪೂರ್ವ ಲಡಾಕ್ ಬಳಿ ಮಿಲಿಟರಿ ತರಬೇತಿ ನಡೆಸುತ್ತಿದ್ದ ವೇಳೆ ನದಿಯಲ್ಲಿ ಹಠಾತ್ ಪ್ರವಾಹ ಉಂಟಾಗಿದೆ. ಯೋಧರು ಟಿ-72 ಟ್ಯಾಂಕ್ ನಲ್ಲಿ ಶೋಕ್ ನದಿ ದಾಟುತ್ತಿದ್ದರು. ಈ ವೇಳೆ ನೀರಿನ ಹರಿವು ಹೆಚ್ಚಾಗಿ ಟ್ಯಾಂಕ್ ನದಿಯಲ್ಲಿ ಸಿಲುಕಿದೆ. ತಕ್ಷಣ ರಕ್ಷಣಾ ತಂಡಗಳು ಧಾವಿಸಿದ್ದವು. ನೀರಿನ ಪ್ರವಾಹ ಹೆಚ್ಚಿದ್ದರಿಂದ ಯೋಧರ ರಕ್ಷಣೆ ಸಾಧ್ಯವಾಗಿಲ್ಲ. ಟ್ಯಾಂಕ್ ನಲ್ಲಿದ್ದ ಯೋಧರು ಸಾವನ್ನಪ್ಪಿದ್ದಾರೆ.

ಈ ದುರಂತದ ಬಗ್ಗೆ ಭಾರತೀಯ ಸೇನೆ ವಿಷಾದ ವ್ಯಕ್ತಪಡಿಸಿದೆ. ಇನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಕೂದ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.


ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button