Latest

ನಾನು ಆತ್ಮಹತ್ಯೆ ಮಾಡಿಕೊಂಡರೆ ರೂಪಾ ಕಾರಣ – ರಾಘವೇಂದ್ರ ಶೆಟ್ಟಿ, ನನಗೆ ಆ್ಯಸಿಡ್ ಬೆದರಿಕೆ ಹಾಕಿದ್ದಾರೆ -ಡಿ.ರೂಪಾ

 

ವಾರ್ಷಿಕ ಸರ್ವಸಾಧಾರಣ ಸಭೆಯಲ್ಲೇ ಬೆದರಿಕೆ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು –

ನಾನು ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡರೆ ಅದಕ್ಕೆ ವ್ಯವಸ್ಥಾಪಕ ನಿರ್ದೇಶಕಿ ಡಿ.ರೂಪಾ ಅವರೇ ಕಾರಣ ಎಂದು ಕರಕುಶಲ ಅಭಿವೃದ್ಧಿ ನಿಗಮದ ಚೇರಮನ್ ಬೇಳೂರು ರಾಘವೇಂದ್ರ ಶೆಟ್ಟಿ ಬೇದರಿಕೆ ಹಾಕಿದ್ದಾರೆ.

Home add -Advt

ಮೇ 27ರಂದು ನಡೆದ ನಿಗಮದ ವಾರ್ಷಿಕ ಸರ್ವಸಾಧಾರಣ ಸಭೆಯಲ್ಲೇ ಅವರು ಈ ಬೆದರಿಕೆ ಹಾಕಿದ್ದಾರೆ. (ವಿಡೀಯೋ ನೋಡಿ)

  ಈ ರೀತಿ ಆತ್ಮಹತ್ಯೆಯ ಬೆದರಿಕೆ ಒಡ್ಡುವುದು ಐಪಿಸಿ ಪ್ರಕಾರ ಶಿಕ್ಷಾರ್ಹ ಅಪರಾಧವಾಗಿದ್ದು,  ಇದರ ಬಗ್ಗೆ ಪ್ರಕರಣ ದಾಖಲಿಸಲು ಅನುಮತಿ ನೀಡುವಂತೆ ಡಿ.ರೂಪಾ ಮುಖ್ಯಕಾರ್ಯದರ್ಶಿಗಳನ್ನು ಕೋರಿದ್ದಾರೆ.
ಅಲ್ಲದೆ, ತಮ್ಮ ಮುಖಕ್ಕೆ ಆ್ಯಸಿಡ್ ಎರಚಿಸುವ ಧಮಕಿಯನ್ನು ಕೂಡ ರಾಘವೇಂದ್ರ ಶೆಟ್ಟಿ ಹಾಕಿದ್ದಾರೆಂದು ರೂಪಾ ಆರೋಪಿಸಿದ್ದಾರೆ.
ಇದರಿಂದಾಗಿ ಕರಕುಶಲ ನಿಗಮದ ಅಧ್ಯಕ್ಷ -ಎಂಡಿ ನಡುವಿನ ವಿವಾದ ವಿಕೋಪಕ್ಕೆ ಹೋಗಿದೆ. ಹೆಚ್ಚಿನ ಪ್ರಚಾರವೇ ಇಲ್ಲದ, ಸರ್ವಜನಿಕರೊಂದಿಗೆ ಹೆಚ್ಚು ಸಂಪರ್ಕವೂ ಇಲ್ಲದ ಕರಕುಶಲ ಅಭಿವೃದ್ಧಿ ನಿಗಮಕ್ಕೆ ಹೊಸ ಫೇಸ್ ಕೊಡುವ ಪ್ರಯತ್ನ ಮಾಡುತ್ತಿರುವ ರೂಪಾಗೆ ಈ ಬೆಳವಣಿಗೆಯಿಂದ ಹಿನ್ನಡೆಯಾದಂತಾಗಿದೆ.

Breaking News -KSHDCL ಚೇರಮನ್ ಬೇಳೂರು ರಾಘವೇಂದ್ರ ಶೆಟ್ಟಿ ವಿರುದ್ಧ ಡಿ.ರೂಪಾ ಗಂಭೀರ ಆರೋಪ: ಮುಖ್ಯ ಕಾರ್ಯದರ್ಶಿಗೆ ಲಿಖಿತ ದೂರು

ರೂಪಾ ಅವರಿಗೆ 75 ಬಾರಿ ನಾನು ನೋಟೀಸ್ ನೀಡಿದ್ದೇನೆ; ಬೇಳೂರು ರಾಘವೇಂದ್ರ ಶೆಟ್ಟಿ

ಎತ್ತಿಕೊಂಡು ಹೋದ ಕಲಾಕೃತಿಗಳಿಗೆ ದುಡ್ಡು ಕೊಡಿ : ಅಧ್ಯಕ್ಷ ರಾಘವೇಂದ್ರ ಶೆಟ್ಟಿಗೇ ನೋಟೀಸ್ ಕೊಟ್ಟ ಎಂಡಿ ರೂಪಾ

Related Articles

Back to top button