Belagavi NewsBelgaum NewsKannada NewsPolitics

*ನಿಪ್ಪಾಣಿ ಜನತೆಗೆ ಗುಡ್ ನ್ಯೂಸ್*

24X7 ನೀರು ಸರಬರಾಜು ಕಾಮಗಾರಿ ಶೀಘ್ರದಲ್ಲಿ ಪ್ರಾರಂಭ

ಪ್ರಗತಿವಾಹಿನಿ ಸುದ್ದಿ: ಕೇಂದ್ರ ಸರ್ಕಾರದ ಪುರಸ್ಕೃತ ಅಮೃತ 2.0 ಯೋಜನೆಯಡಿ ನಿಪ್ಪಾಣಿ ನಗರಕ್ಕೆ ಕುಡಿಯುವ ನೀರು ಸರಬರಾಜು ಯೋಜನೆಯ ಅನುಷ್ಠಾಣಗೋಳಿಸುವ ಕಾಮಗಾರಿಯ ವಿಸ್ತ್ರತ ಯೋಜನಾ ವರದಿಗೆ(ಡಿಪಿಆರ್) ಆಡಳಿತಾತ್ಮಕ ಅನುಮೋದನೆ ಸಿಕ್ಕಿದೆ ಎಂದು ನಿಪ್ಪಾಣಿ ಶಾಸಕಿ ಶಶಿಕಲಾ ಜೊಲ್ಲೆ ತಿಳಿಸಿದ್ದಾರೆ.

ನಿಪ್ಪಾಣಿ ನಗರದಲ್ಲಿ 2050 ವರೆಗೆ ನೀರಿನ ಕೊರತೆ ಆಗದಂತೆ ನೋಡಿಕೊಳ್ಳುವುದು ಮತ್ತು ಜವಾಹರ ಕೆರೆಯಲ್ಲಿ ನೀರಿನ ಶೇಖರಣೆ ಹೆಚ್ಚಿಸುವ ಕುರಿತು ಮೆll ನಳಂದಾ ಎಂಜಿಕೋನ್ ಪ್ರೈವೇಟ್ ಲಿಮಿಟೆಡ್. ಪಾಟ್ನಾ ,ಬಿಹಾರ ಅವರ ಜೊತೆ ಒಪ್ಪಂದ ಮಾಡಿಕೊಳ್ಳಲಾಗಿದೆ.ಪ್ರಸ್ತಾವಿತ ಜಾಕವೆಲ್ ದಿಂದ (ವೇದಗಂಗಾ ನದಿಯಿಂದ) ಜವಾಹರ ಕೆರೆಯವರೆಗಿನ ಅಂದಾಜು 7.70ಕಿ.ಮೀ ಪೈಪಲೈನ ಅಳವಡಿಸುವದು & ಅಗೆದ ರಸ್ತೆಯನ್ನು ಮರುನಿರ್ಮಾನ ಮಾಡಲಾಗುವುದು.

Home add -Advt

ಕೇಂದ್ರ ಸರ್ಕಾರದ ಅಮೃತ 2.0 ಯೋಜನೆಯಡಿ 32.83 ಕೋಟಿ ರೂ.ಮೊತ್ತದ್ದಲ್ಲಿ ಕೇಂದ್ರ ಸರ್ಕಾರದ ಪಾಲು-50%, ರಾಜ್ಯ ಸರ್ಕಾರದ ಪಾಲು-40% ಸಂಬಂಧಪಟ್ಟ ನಗರಸಭೆ ನಿಪ್ಪಾಣಿ ಪಾಲು -10% ಆಗಿದ್ದು,2050 ವರೆಗೆ ಜವಾಹರ್ ಕೆರೆಗೆ ಹೆಚ್ಚಿನ ನೀರಿನ ಶೇಖರಣೆ ಹೆಚ್ಚಿಸುವ ಉದ್ದೇಶದಿಂದ ಪ್ರತ್ಯೇಕವಾಗಿ ವೇದಗಂಗಾ ನದಿಯಿಂದ ಪೈಪ್ ಲೈನ್ ಅಳವಡಿಸಿ ಕೆರೆಗೆ ನೀರು ತುಂಬಿಸುವ ಕುರಿತು ಯೋಜನಾ ವರದಿ ತಯಾರಿಸಲಾಗಿದೆ.ನಗರದಲ್ಲಿ 24*7 ವ್ಯವಸ್ಥಿತವಾಗಿ ಜನರ ಅನುಕೂಲಕ್ಕಾಗಿ ನೀರು ಸರಬರಾಜು ಮಾಡಲು 10 ಲಕ್ಷ ಲೀಟರ್ ನೀರಿನ ಮೇಲ್ಮಟ್ಟದ ಜಲಸಂಗ್ರಹಾಲಯ (OHT) ಮತ್ತು 5 ಲಕ್ಷ ಲೀಟರ್ ಮೇಲ್ಮಟ್ಟದ ಜಲಸಂಗ್ರಹಾಲಯ ಅಕ್ಕೊಳ ರಸ್ತೆ ಹುಡಕೋ ಕಾಲನಿಯಲ್ಲಿ (OHT) ನಿರ್ಮಾಣ.2 ಓವರ್ ಹೆಡ್ ಟ್ಯಾಂಕ್ ನಿರ್ಮಿಸಲಾಗುವುದು.ಮತ್ತು ಮಳೆಗಾಲದಲ್ಲಿ ಯಮಗರ್ಣಿ ಜಾಕವೆಲ್ ಹೋಗಲು ತೊಂದರೆಯಾಗದಂತೆ ಮುಖ್ಯ ರಸ್ತೆಯಿಂದ 5 ಮೀಟರ್ ಅಗಲ, 30 ಮೀಟರ್ ಉದ್ದ ಸೇತುವೆ ಬ್ರಿಡ್ಜ್ ನಿರ್ಮಿಸಿ ಶೀಘ್ರವೇ ಕಾಮಗಾರಿಯನ್ನು ಪ್ರಾರಂಬಿಸಲಾಗುವದೆಂದು ಮಾಜಿ ಸಚಿವರು ಹಾಗೂ ನಿಪ್ಪಾಣಿ ಶಾಸಕರಾದ ಶಶಿಕಲಾ ಜೊಲ್ಲೆ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related Articles

Back to top button