Kannada NewsKarnataka NewsLatest

​ಬೆಳಗಾವಿ ಗ್ರಾಮೀಣ ರಸ್ತೆ ಕಾಮಗಾರಿಗಳಿಗೆ ಭೂಮಿ ಪೂಜೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ ಬೆಳಗಾವಿ ಗ್ರಾಮೀಣ​ ಕ್ಷೇತ್ರದ ಗೆಜಪತಿ ಹಾಗೂ ಹುಲಿಕವಿ ಗ್ರಾಮಗಳ ರಸ್ತೆಗಳ ಅಭಿವೃದ್ಧಿ​ ಕಾಮಗಾರಿಗೆ ​ಸೋಮವಾರ ಭೂಮಿ ಪೂಜೆ ನೆರವೇರಿಸಲಾಯಿತು.

​ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಅವರ ಅನುಪಸ್ಥಿತಿಯಲ್ಲಿ ಸ್ಥಳೀಯ ಜನಪ್ರತಿನಿಧಿಗಳು​ ಹಾಗೂ ​ಯುವ ಕಾಂಗ್ರೆಸ್ ಮುಖಂಡ ಮೃಣಾಲ ಹೆಬ್ಬಾಳಕರ್ ಸೇರಿ​ ಪೂಜೆ​ ನೆರವೇರಿಸಿದರು. ಪಂಚಾಯಿತಿ ರಾಜ್ ಎಂಜಿನಿಯರಿಂಗ್ ಇಲಾಖೆಯಿಂದ ಈ ರಸ್ತೆಗಳಿಗೆ ಒಟ್ಟೂ 20 ಲಕ್ಷ ರೂ. ಮಂಜೂರಾಗಿದೆ.
​ 
ಈ ಸಂದರ್ಭದಲ್ಲಿ ಆಯಾ ಗ್ರಾಮಗಳ‌ ಹಿರಿಯರು, ಬಸವಣ್ಣೆಪ್ಪ, ರಾಮಪ್ಪ ಲಂಗೂಟಿ, ಸಿದ್ದಪ್ಪ ಯರಗೊಪ್ಪ, ಶಂಕರಗೌಡ ಪಾಟೀಲ, ಸಂತೋಷ ಬಂಡವ್ವಗೋಳ, ಅಶೋಕ ಪಾಟೀಲ, ಸಿದ್ದು ಚಾಪಗಾಂವಿ, ಬಸವಂತ ನಾಯ್ಕ, ವಿಠ್ಠಲ ಅರ್ಜುನವಾಡಿ, ರಮೇಶ ಪಾಟೀಲ ಮುಂತಾದವರು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button