Latest

ವಿವಾಹಕ್ಕೆ ಸಿದ್ಧವಾಗಿದ್ದ ಜೋಡಿ: ಅಪಘಾತದಲ್ಲಿ ಪ್ರಿಯತಮ ಸಾವು; ಸುದ್ದಿ ಕೇಳಿ ಆತ್ಮಹತ್ಯೆಗೆ ಶರಣಾದ ಯುವತಿ

ಪ್ರಗತಿವಾಹಿನಿ ಸುದ್ದಿ; ತುಮಕೂರು; ಎರಡು ವರ್ಷಗಳಿಂದ ಪ್ರೀತಿಸಿ ಮನೆಯವರನ್ನು ಒಪ್ಪಿಸಿ ವಿವಾಹಕ್ಕೆ ಸಿದ್ಧತೆ ನಡೆಸಿದ್ದ ಜೋಡಿ ಸಾವಿನಲ್ಲಿಯೂ ಒಂದಾಗಿರುವ ಘಟನೆ ತುಮಕೂರು ಜಿಲ್ಲೆ ಅರೆಹಳ್ಳಿಯಲ್ಲಿ ನಡೆದಿದೆ.

ಧನುಷ್ (23) ಸುಷ್ಮಾ (22) ಮೃತರು. ತುಮಕೂರಿನ ಮಸ್ಕಲ್ ಗ್ರಾಮದ ಧನುಷ್ ಮೇ 11ರಂದು ನೆಲಮಂಗಲ ಬಳಿಯ ಕುಲುವನಹಳ್ಳಿ ಬಳಿ ಅಪಘಾತದಲ್ಲಿ ಮೃತಪಟ್ಟಿದ್ದರು.

Home add -Advt

ಪ್ರಿಯತಮನ ಸಾವಿನ ಸುದ್ದಿಕೇಳಿ ಆಘಾತಕ್ಕೊಳಗಾಗಿದ್ದ ಯುವತಿ ಸುಷ್ಮಾ ತೀವ್ರವಾಗಿ ನೊಂದಿದ್ದಳು. ಧನುಷ್ ಸಾವಿನ ಯೋಚನೆಯಿಂದ ಹೊರಬರಲಾಗದೇ ಇದೀಗ ವಿಷಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಳು.

ವಿಷಯ ಗೊತ್ತಾಗುತ್ತಿದ್ದಂತೆ ಕುಟುಂಬದವರು ಸುಷ್ಮಾಳನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಗಾದೇ ಕೊನೆಯುಸಿರೆಳೆದಿದ್ದಾಳೆ.

ಧನುಷ್ ಹಾಗೂ ಸುಷ್ಮಾ ಇಬ್ಬರೂ ದೂರದ ಸಂಬಂಧಿಕರೂ ಆಗಿದ್ದರು ಎನ್ನಲಾಗಿದೆ. ಬೆಂಗಳೂರಿನಲ್ಲಿ ಬಟ್ಟೆ ಅಂಗಡಿ ಇಟ್ಟಿದ್ದ ಧನುಷ್ ಊರಿನ ಜಾತ್ರೆಗೆ ತೆರಳುತ್ತಿದ್ದ ವೇಳೆ ಅಪಘಾತಕ್ಕೀಡಾಗಿ ಸಾವನ್ನಪ್ಪಿದ್ದರು.
ರಥೋತ್ಸವದಲ್ಲಿ ಅವಘಡ; ರಥದ ಚಕ್ರಕ್ಕೆ ಸಿಲುಕಿ ಭಕ್ತ ದುರ್ಮರಣ

Related Articles

Back to top button