Latest
ಎಂ.ಬಿ.ನಾತು ನಿಧನ

ಪ್ರಗತಿವಾಹಿನಿ ಸುದ್ದಿ, ಹುಬ್ಬಳ್ಳಿ –
ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ನಿರ್ದೇಶಕ ಮುಕುಂದ ನಾತೂ (74) ನಿಧನರಾದರು. ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಹುಬ್ಬಳ್ಳಿಯಲ್ಲಿ ನಿಧನರಾದರು.
ಸಾಮಾಜಿಕ ಮುಂದಾಳುವಾಗಿದ್ದ ಅವರು ಬ್ರಾಹ್ಮಣ ಸಮಾಜದ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿದ್ದಾರೆ.
ಸುವರ್ಣ ಸುದ್ದಿವಾಹಿನಿಯ ಪ್ರಶಾಂತ ನಾತು ಎಂ.ಬಿ.ನಾತು ಅವರ ಪುತ್ರ.
ನಾತು ಅವರ ನಿಧನಕ್ಕೆ ಹವ್ಯಕ ಮಂಡಳಿ, ಕರ್ನಾಟಕ ಮಾಧ್ಯಮಿಕ ಶಾಲಾ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಜಿ.ಆರ್.ಭಟ್ ಸಂತಾಪ ಸೂಚಿಸಿದ್ದಾರೆ.




