Kannada NewsKarnataka NewsLatest

ಉದ್ಯಮಬಾಗ ಪೊಲೀಸರಿಂದ ಮಟಕಾ ದಾಳಿ; ಮೂವರ ಬಂಧನ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಪಾರ್ವತಿ ನಗರ, ಉದ್ಯಮಬಾಗ ಬಸ್‌ಸ್ಟಾಂಡ್ ಹತ್ತಿರ ಓಸಿ/ಮಟಕಾ ಆಡುತ್ತಿದ್ದಾರೆ ಎಂದು ಖಚಿತವಾದ ಮಾಹಿತಿ ಬಂದಂತೆ ಉದ್ಯಮಬಾಗ್ ಪೊಲೀಸ್ ಇನಸ್ಪೆಕ್ಟರ್ ದಯಾನಂದ ಶೇಗುಣಸಿ ಮತ್ತು ಸಿಬ್ಬಂದಿ ದಾಳಿ ಮಾಡಿ  ಇಮಾಮಸಾಬ ಬೇಪಾರಿ (ಸಾ|| ಕಸಾಯಿ ಗಲ್ಲಿ ಖಡ್ಡಾ) ಅಫ್ಜಲ್ ಸಿದ್ಧಕ್ಕಿ (ಸಾ|| ಕಸಾಯಿ ಗಲ್ಲಿ ಖಡ್ಡಾ), ಪರುಶರಾಮ ಅನಂತಪುರ (ಸಾ|| ಕಾಮತ ಗಲ್ಲಿ) ಇವರನ್ನು ವಶಕ್ಕೆ ಪಡೆದುಕೊಂಡು ಅವರಿಂದ ರೂ. ೨೪೩೦/- ಹಣ, ಓಸಿ ಚೀಟಿ, ಪೆನ್ನು, ಇತ್ಯಾದಿ ಸಾಮಗ್ರಿಗಳನ್ನು ಜಪ್ತಪಡಿಸಿಕೊಂಡು ಕಾನೂನು ಕ್ರಮ ಜರುಗಿಸಲಾಗಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button