Belagavi NewsBelgaum NewsKannada NewsKarnataka News

*ಮಹಿಳೆ ನಾಪತ್ತೆ: ಕ್ಯಾಂಪ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು*

ಪ್ರಗತಿವಾಹಿನಿ ಸುದ್ದಿ: ಬೆಳಗಾವಿಯ ಗಣೇಶಪುರದಲ್ಲಿ ವಾಸವಿದ್ದ ಉಮಾ ನರೇಶ ಕುಮಾರ್ ಬಿಸಾ (39) ಅವರು ಮೇ. 15 ರಿಂದ ನಾಪತ್ತೆಯಾಗಿದ್ದಾರೆ ಎಂದು ಕ್ಯಾಂಪ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಮೇ.15 ರಂದು ಉಮಾ ನರೇಶ ಕುಮಾರ್ ಬಿಸಾ ಎಂಬ ಮಹಿಳೆ ಕೆಲಸಕ್ಕೆ ವಡಗಾಂವಿ ಹೋಗುತ್ತೇನೆ ಎಂದು ಹೇಳಿ ಹೋದವಳು ರಾತ್ರಿಯಾದರೂ ಮನೆಗೆ ವಾಪಾಸ್ ಆಗಿಲ್ಲ. ಉಮಾ ನಾಪತ್ತೆಯಾಗಿದ್ದಾರೆ. ಉಮಾ ನರೇಶ ಕುಮಾರ್ ಗೆ 3 ಮಕ್ಕಳಿದ್ದಾರೆ. ತಾಯಿ ಏಕಾಏಕಿ ನಾಪತ್ತೆಯಾಗಿದ್ದು, ಮಕ್ಕಳು ಕಂಗಾಲಾಗಿದ್ದಾರೆ.

ವಡಗಾಂವಿನ ಆರೋಗ್ಯ ಕೇಂದ್ರದಲ್ಲಿ ಕೆಲಸ ಮಾಡುತ್ತೀದ್ದ ಇವರ ಬಗ್ಗೆ ಮಾಹಿತಿ ದೊರೆತಲ್ಲಿ, ಕ್ಯಾಂಪ್ ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಪ್ರಕಟಣೆಯಲ್ಲಿ ತಿಳಿಸಿದೆ.

Home add -Advt

Related Articles

Back to top button