Education
*ಶಿಕ್ಷಕರಿಬ್ಬರಿಗೆ ಕಾರಣ ಕೇಳಿ ನೋಟಿಸ್ ಜಾರಿ*
![](https://pragativahini.com/wp-content/uploads/2022/07/Latest-News.jpg)
ಪ್ರಗತಿವಾಹಿನಿ ಸುದ್ದಿ: 1ರಿಂದ 5ನೇ ತರಗತಿವರೆಗೆ ಮಾತ್ರ ಪಾಠ ಬೋಧನೆ ಮಾಡುವುದಾಗಿ ಹೇಳಿದ ಹಿನೆಲೆಯಲ್ಲಿ ಇಬ್ಬರು ಶಿಕ್ಷಕರಿಗೆ ಕ್ಷೇತ್ರ ಶಿಕ್ಷಣಾಧಿಕಾರಿ ಕಾರಣ ಕೇಳಿ ನೋಟಿಸ್ ಜಾರಿ ಮಾಡಿದ್ದಾರೆ.
ಮಧುಗಿರಿ ತಾಲೂಕಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರಾದ ಅರವಿಂದ ಶಶಿ ಹಾಗೂ ಪೂರ್ಣಿಮಾ ಶಶಿ ಅವರಿಗೆ ನೋಟಿಸ್ ನೀಡಲಾಗಿದೆ.
1ರಿಂದ 5ನೇ ತರಗತಿವರೆಗೆ ಮಾತ್ರ ಪಾಠ ಬೋಧನೆ ಮಾಡುವುದಾಗಿ 6 & 7 ನೇ ತರಗತಿಯ ಯಾವುದೇ ಕೆಲಸವನ್ನು ಮಾಡುವುದಿಲ್ಲವೆಂದು ಇಬ್ಬರು ಶಿಕ್ಷಕರು ಲಿಖಿತವಾಗಿ ಸಲ್ಲಿಸಿದ್ದಕ್ಕೆ ವೃತ್ತಿ ನಿರಾಸಕ್ತಿ,ಕರ್ತವ್ಯ ನಿರ್ಲಕ್ಷ್ಯ ಕರ್ತವ್ಯಲೋಪವಾಗಿರುತ್ತದೆಂದು ಶಿಕ್ಷಕರಿಗೆ ಶಾಲಾ ಶಿಕ್ಷಣ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿ ಕಾರಣ ಕೇಳಿ ನೋಟಿಸ್ ಜಾರಿಮಾಡಿದ್ದಾರೆ.