Belagavi NewsBelgaum NewsElection NewsKannada NewsKarnataka NewsPolitics

25ಕ್ಕೂ ಹೆಚ್ಚು ಕಾರ್ಯಕರ್ತರು ಬಿಜೆಪಿ ಸೇರ್ಪಡೆ

ಪ್ರಗತಿವಾಹಿನಿ ಸುದ್ದಿ, ಚಿಕ್ಕೋಡಿ – ಬಿಜೆಪಿಯ ಸಿದ್ದಾಂತವಾದ “ಸೇವೆಯೇ  ಸಂಘಟನೆ” ಮತ್ತು ದೇಶದ ಪ್ರಧಾನಿ ನರೇಂದ್ರ ಮೋದಿಯವರ “ಸಬ್‌ ಕಾ ಸಾತ್‌ ಸಬ್‌ ಕಾ ವಿಕಾಸ್‌” ಸಿದ್ದಾಂತದಲ್ಲಿ ನಂಬಿಕೆ ಇಟ್ಟು  ಹಾಗೂ ಸಂಸದ ಅಣ್ಣಾಸಾಹೇಬ ಜೊಲ್ಲೆ  ಮಾಡಿರುವ ಅಭಿವೃದ್ದಿ  ಕಾರ್ಯಗಳನ್ನು ಮೆಚ್ಚಿ ನಿಪ್ಪಾಣಿ ಮತಕ್ಷೇತ್ರದ ಭೋಜವಾಡಿ ಗ್ರಾಮದ 25ಕ್ಕೂ ಹೆಚ್ಚು ಕಾರ್ಯಕರ್ತರು ಬಿಜೆಪಿ ಸೇರಿದರು.

ಅಮಿತ ಪಾಟೀಲ, ಅಣ್ಣಾಸಾಹೇಬ ಪಾಟೀಲ, ಮಲಗೌಡ ಪಾಟೀಲ ಅವರ ಮುಂದಾಳತ್ವದಲ್ಲಿ ಆದಗೌಡ ಪಾಟೀಲ, ರಾಹುಲ್ ಪಾಟೀಲ, ಅಭಯ ಪಾಟೀಲ, ದೀಪಕ ಕುಪ್ಪನಟ್ಟೆ, ಅಭಿನಂದನ್ ಪಾಟೀಲ, ರಾಕೇಶ ಪಾಟೀಲ, ಸಾತಗೌಡ ಪಾಟೀಲ, ಸಮೇದ ಪಾಟೀಲ,‌ ಶಶಿಕಾಂತ ನಾರದಗೆ, ಸಂದೀಪ ಸದಲಗೆ, ಸಹದೇವ ನಾಯಿಕ, ಸುನಿಲ ಉತ್ತುರೆ, ವಿಜಯ ಉತ್ತುರೆ ರೆ,ಶ್ರೀ ಅಶೋಕ್ ಪಾಟೀಲ, ಹಾಗೂ ಅವರ ತಂಡದ ಸದಸ್ಯರು ರಾಷ್ಟ್ರವಾದಿ ಕಾಂಗ್ರೆಸ್  ಪಕ್ಷ ತೊರೆದು ನಮ್ಮ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದು, ಅವರನ್ನು ನಿಪ್ಪಾಣಿ ಶಾಸಕಿ ಶಶಿಕಲಾ ಜೊಲ್ಲೆ ಆತ್ಮೀಯವಾಗಿ  ಬಿಜೆಪಿಗೆ ಬರಮಾಡಿಕೊಂಡರು.

ಈ ಸಂದರ್ಭದಲ್ಲಿ ಪ್ರಶಾಂತ ಪಾಟೀಲ, ಡಾ. ಸುದರ್ಶನ್ ಮುರಾಬಟ್ಟೆ,  ಪ್ರಶಾಂತ ಮಗದುಮ್, ವೀನೋದ ಸಂಗಪಾಳ, ವಿರೆಂದ್ರ ಬುರ್ಜಿ, ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button