Belagavi NewsBelgaum NewsPolitics

*ಕಾರ್ಯಕರ್ತರೇ ಬಿಜೆಪಿಗೆ ಬಲಿಷ್ಠ ಶಕ್ತಿ: ಸಂಸದ ಅಣ್ಣಾಸಾಹೇಬ ಜೊಲ್ಲೆ*

ಪ್ರಗತಿವಾಹಿನಿ ಸುದ್ದಿ: ಜತ್ರಾಟ ಗ್ರಾಮ ಪಂಚಾಯತ್ ಸದಸ್ಯರಾದ ರಮೇಶ ಕಾಂಬಳೆ ಹಾಗೂ ಅವರ ತಂಡದ ಸದಸ್ಯರು ಬಿಜೆಪಿಗೆ ಸೇರ್ಪಡೆಯಾದರು.

ಗೌರವಾನ್ವಿತ ಪ್ರಧಾನಮಂತ್ರಿಗಳಾದ ಸನ್ಮಾನ್ಯ ನರೇಂದ್ರ ಮೋದಿ ಅವರ ಕೇಂದ್ರ ಸರ್ಕಾರದ ಅಭಿವೃದ್ದಿ ಕಾರ್ಯಗಳನ್ನು ಹಾಗೂ ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ 8810 ಕೋಟಿಯ ಅಭಿವೃದ್ದಿ ಮಾಡಿರುವ ಕಾರ್ಯಗಳನ್ನು ಮೆಚ್ಚಿ ನಿಪ್ಪಾಣಿ ಮತಕ್ಷೇತ್ರದ ಜತ್ರಾಟ ಗ್ರಾಮ ಪಂಚಾಯತ್ ಸದಸ್ಯರಾದ ರಮೇಶ ಕಾಂಬಳೆ ಅವರ ಮುಂದಾಳತ್ವದಲ್ಲಿ ಅಮರ ಕಾಂಬಳೆ, ಸೂರ್ಯಕಾಂತ ಇಂಗಳೆ,ನವೀನ ಕಾಂಬಳೆ, ಸಾತಪ್ಪ ಕಾಂಬಳೆ, ದತ್ತಾ ಮಾನೆ, ಸಂದೀಪ ಮಾನೆ, ರವೀಂದ್ರ ಕಾಂಬಳೆ, ಅನಿಲ ಶಿಂಧೆ, ಶಂಕರ ಕಾಂಬಳೆ, ಸ್ವಪ್ನಿಲ್ ವರಾಳೆ ಹಾಗೂ ಅವರ ತಂಡದ ಸದಸ್ಯರು ಕಾಂಗ್ರೆಸ್ ಪಕ್ಷ ತೊರೆದು ನಮ್ಮ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡಿಗೊಂಡಿದ್ದಾರೆ.

ಅವರನ್ನು ಆತ್ಮೀಯವಾಗಿ ನಮ್ಮ ಭಾರತೀಯ ಜನತಾ ಪಕ್ಷಕ್ಕೆ ಸಂಸದರಾದ ಅಣ್ಣಾಸಾಹೇಬ ಜೊಲ್ಲೆ ಹಾಗೂ ನಿಪ್ಪಾಣಿ ಶಾಸಕರಾದ ಶಶಿಕಲಾ ಜೊಲ್ಲೆ ಅವರು ಬರಮಾಡಿಕೊಂಡರು.

ಈ ಸಂದರ್ಭದಲ್ಲಿ ಮಲಗೌಡ ಪಾಟೀಲ,ಸಿದ್ದು ನರಾಟೆ,ಪ್ರಶಾಂತ ಪಾಟೀಲ,ವಿಜಯ ಜಬಡೆ ಅಮಿತ ಖೋತ ಉಪಸ್ಥಿತರಿದ್ದರು.

Related Articles

Back to top button