Belagavi NewsBelgaum NewsCrimeKarnataka NewsNational
*ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ: ಇಬ್ಬರು ಕಳ್ಳರ ಬಂಧನ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ನಗರದ ತಿಲಕವಾಡಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಇಬ್ಬರು ಕಳ್ಳರನ್ನು ಬಂಧಿಸಿದ್ದಾರೆ.
ತಿಲಕವಾಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಬಂಗಾರ ಕಳವು ಪ್ರಕರಣವನ್ನು ತನಿಖೆ ನಡೆಸಿದ ಪೊಲೀಸರ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಅನಗೋಳದ ಇಂದಿರಾ ನಗರ ನಿವಾಸಿ ತುಷಾರ ಮಾರುತಿ ಕರನ್ನವರ (22),
ಹಾಗೂ ಅನಗೋಳದ ರಘುನಾಥ ಪೇಠ ನಿವಾಸಿ ಯಲ್ಲಪ್ಪ ಗಜಾನನ ಮುಗಳಿ (28) ಬಂಧಿತ ಆರೋಪಿಗಳು. ಈ ಇಬ್ಬರ ಕಳ್ಳರು ಅನಗೋಳದ ಶಿವಶಕ್ತಿ ನಗರದ ಮನೆಯಲ್ಲಿ ಕಳ್ಳತನ ಮಾಡಿದ್ದರು.
ಬಂಧಿತರಿಂದ 2,49,260 ರೂ ಮೌಲ್ಯದ ಬಂಗಾರದ ಆಭರಣಗಳನ್ನು ವಶಕ್ಕೆ ಪಡೆಯಲಾಗಿದೆ. ಈ ಕಾರ್ಯಾಚರಣೆಯಲ್ಲಿ ತಿಲಕವಾಡಿ ಪಿಎಸ್ಐ ಪರಶುರಾಮ ಪೂಜೇರಿ ಹಾಗೂ ಸಿಬ್ಬಂದಿ ತಂಡ ಭಾಗಿ ಆಗಿದ್ದರು. ಪೊಲೀಸ್ ಆಯುಕ್ತರು ಹಾಗೂ ಡಿಸಿಪಿಗಳು ತಿಲಕವಾಡಿ ಪೊಲೀಸರ ಕಾರ್ಯಕ್ಕೆ ಶ್ಲಾಘಿಸಿದ್ದಾರೆ.




