Kannada NewsKarnataka NewsLatest

ನನದಿ ಗ್ರಾಮದಿಂದ ಸಂಸದ ಅಣ್ಣಾಸಾಹೇಬ ಜೊಲ್ಲೆ ಪಾದಯಾತ್ರೆ

ಪ್ರಗತಿವಾಹಿನಿ ಸುದ್ದಿ, ಚಿಕ್ಕೋಡಿ -ಮಹಾತ್ಮಾ ಗಾಂಧೀಜಿ ಅವರ ೧೫೦ ನೇ ಜಯಂತಿ ಅಂಗವಾಗಿ ಪ್ರತಿ ಸಂಸದರು ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಕನಿಷ್ಠ ೧೫೦ ಕಿ.ಮೀ. ಪಾದಯಾತ್ರೆ ಮಾಡಿ ಗಾಂಧೀಜಿ ತತ್ವಗಳ ಬಗ್ಗೆ ಜಾಗೃತಿ ಮೂಡಿಸಬೇಕೆಂಬ ಪ್ರಧಾನಿ ನರೇಂದ್ರ ಮೋದಿ ಸಲಹೆ ಮೆರೆಗೆ ತಾಲೂಕಿನ ನನದಿ ಗ್ರಾಮದಿಂದ ಸಂಸದ ಅಣ್ಣಾಸಾಹೇಬ ಜೊಲ್ಲೆ ಪಾದಯಾತ್ರೆ ನಡೆಸಿದರು.
ಚಿಕ್ಕೋಡಿ ವಿಧಾನಸಭಾ ಕ್ಷೇತ್ರದ ನನದಿ ಗ್ರಾಮದಿಂದ ಪಾದಯಾತ್ರೆ ಆರಂಭಿಸಿ ನನದಿವಾಡಿ, ಹೀರೆಕುಡಿ, ನಾಗರಾಳ, ನೇಜ, ಗ್ರಾಮದಲ್ಲಿ ಪಾದಯಾತ್ರೆ ನಡೆಸಿದರು. ಪಾದಯಾತ್ರೆಯಲ್ಲಿ ಗಾಂಧೀಜಿ ಅವರ ತತ್ವ, ವಿಚಾರಧಾರೆ, ಹಾಗೂ ಸ್ವಚ್ಛ ಭಾರತ, ಜಲಶಕ್ತಿ ಸಂರಕ್ಷಣೆ ಮತ್ತು ವ್ಯಸನ ಮುಕ್ತ ಭಾರತದ ಕುರಿತು, ಪ್ಲಾಸ್ಟಿಕ್ ಮಕ್ತ ಸಮಾಜ ನಿರ್ಮಾಣ ಮಾಡಬೇಕೆಂಬ ಗಾಂಧೀಜಿ ಅವರ ಕಂಡ ಕನಸನ್ನು ಇಂದಿನ ಪ್ರಧಾನಿ ಮೋದಿ ಅವರು ಸಾಕಾರಗೊಳಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಸುಭದ್ರ ಭಾರತ ದೇಶ ನಿರ್ಮಾಣವಾಗುತ್ತಿದೆ. ವಿವಿಧ ಜನಪರ ಯೋಜನೆಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸಿದರು. ಜತೆಗೆ ಗ್ರಾಮಗಳಲ್ಲಿರುವ ಸಮಸ್ಯೆಗಳನ್ನೂ ಆಲಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಕಲ್ಲಪ್ಪ ಜಾಧವ, ಅಪ್ಪಾಸಾಬ ಚಗಲೆ, ಸದಾಶಿವ ಕೊಕಣೆ, ಚಂದ್ರಕಾಂತ ಕೊಕಣೆ, ವಿಲಾಸ ಚವ್ವಾಣ, ಬಾಬಾಸಾಬ ದೇಸಾಯಿ, ರಾಜು ಪುಟಾಣೆ, ರಾಜು ಮಾನೆ, ಅನ್ನಪ್ಪ ಅಕ್ಕೋಳೆ, ಮಲ್ಲಪ್ಪ ನಾಯಿಕ, ಸಿದ್ದಪ್ಪ ನಾಯಿಕ, ಸುಭಾಷ ಚೌಗಲೆ, ವಿಕ್ರಮ ಬನಗೆ, ಚಿದಾನಂದ ಚೌಗಲೆ, ಧೂಳಪ್ಪ ಮೊಳಕೆ, ಬಾಬುರಾವ ಮಾಳಿ, ಸುಭಾಷ ಮಾಳಿ, ಬಾಬು ಸನದಿ, ಸುನೀಲ ನಾಯಿಕ, ದರಿಗಡ ಭರಭರೆ, ಅನ್ನಪ್ಪ ಸುಳಕುಡೆ, ರಾವಸಾಬ ಬಿಷ್ಟನ್ನವರ, ಸಂತೋಷ ವಡೇರ, ದಾದಾಸಾಹೇಬ ಗಾಯಕವಾಡೆ, ಗಣಪತರಾವ ನಿಂಬಾಳಕರ, ಧೂಳಗಡ ಮುದ್ದಾಯಿ, ಸೋಮನಾಥ ಹಿರೇಮಠ, ಅಂಬಾಜಿ ಶಿತೋಳೆ, ಬಾಳಾಸಾಬ ವಡೇರ, ಮಹಾವೀರ ಖೋತ, ನಜೀರ ಬೇಗ, ಜಯಕುಮಾರ ಖೋತ ನೂರಾರು ಸಾರ್ವಜನಿಕರು, ಬಿಜೆಪಿ ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button