Belagavi NewsBelgaum NewsElection NewsKannada NewsKarnataka NewsPolitics

ಕುಟುಂಬ ಸಮೇತ ಮತದಾನ ಮಾಡಿದ ಸಂಸದ ಕಡಾಡಿ

ಪ್ರಗತಿವಾಹಿನಿ ಸುದ್ದಿ, ಮೂಡಲಗಿ : ೫ ವರ್ಷಗಳ ಕಾಲ ರಾಷ್ಟ್ರವನ್ನಾಳುವ ಸರ್ಕಾರವನ್ನು ಆಯ್ಕೆ ಮಾಡುವ ಅತ್ಯಂತ ಮಹತ್ವ ಪೂರ್ಣವಾದ ಜವಾಬ್ದಾರಿ ಮತದಾರರ ಮೇಲಿದ್ದು, ಮತ ಎಂಬುದು ಒಂದು ಬ್ರಹ್ಮಾಸ್ತ್ರವಿದ್ದಂತೆ. ಅದನ್ನು ಬಳಸುವ ಮೂಲಕ ಒಂದು ಒಳ್ಳೆಯ ಸರ್ಕಾರವನ್ನು ರಚನೆ ಮಾಡಲು ಕಾರಣಿಭೂತರಾಗಬೇಕೆಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಅವರು ಮತದಾರರಿಗೆ ವಿನಂತಿಸಿದರು.
ಲೋಕಸಭಾ ಕ್ಷೇತ್ರದ ಚುನಾವಣೆ ದಿನದಂದು ಕಲ್ಲೋಳಿ ಪಟ್ಟಣದ ೧೦೧ನೇ ಮತ ಕೇಂದ್ರದಲ್ಲಿ ಕುಟುಂಬಸ್ಥರೊಂದಿಗೆ ಮತ ಚಲಾಯಿಸಿ ಮಾತನಾಡಿದರು. ಜಗತ್ತಿನ ಬೇರೆ ಬೇರೆ ದೇಶಗಳ ಸುಮಾರು ೨೦ ರಾಜಕೀಯ ಪಕ್ಷಗಳು ಈ ಚುನಾವಣೆಯ ಅಧ್ಯಯನ ಮಾಡಲಿಕ್ಕೆ ಭಾರತಕ್ಕೆ ಬಂದಿದ್ದಾರೆ ಇದು ಅತ್ಯಂತ ಗಮನಾರ್ಹ ಅಂಶವೆಂದು ಹೇಳಿದರು.

ಕಳೆದ ಒಂದು ತಿಂಗಳುಗಳ ಕಾಲ ನಮ್ಮೆಲ್ಲ ಕಾರ್ಯಕರ್ತರ ಪರಿಶ್ರಮದ ಫಲವಾಗಿ ಬೆಳಗಾವಿ ಮತ್ತು ಚಿಕ್ಕೋಡಿ ಈ ಎರಡು ಲೋಕಸಭಾ ಕ್ಷೇತ್ರದ ಅಭ್ಯರ್ಥಿಗಳು ಹೆಚ್ಚು ಮತಗಳನ್ನು ಪಡೆಯುವ ಮೂಲಕ ನೀರಿಕ್ಷಿತ ಗೆಲುವನ್ನು ಸಾಧಿಸಲಿದ್ದಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಂಸದರ ತಂದೆಯವರಾದ ಭೀಮಪ್ಪ ಕಡಾಡಿ, ಸಂಸದರ ಪತ್ನಿ ಸುಮಿತ್ರಾ ಕಡಾಡಿ, ಮಕ್ಕಳಾದ ಸತೀಶ ಕಡಾಡಿ (ಬಿಡಿಸಿಸಿ ಬ್ಯಾಂಕ ನಿರ್ದೇಶಕ), ಲಾವಣ್ಯ, ಪ್ರತಿಭಾ ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button