Kannada NewsKarnataka NewsLatest
*ತಹಶಿಲ್ದಾರ್ ಕಚೇರಿ FDA ಲೋಕಾಯುಕ್ತ ಬಲಗೆ*

ಪ್ರಗತಿವಾಹಿನಿ ಸುದ್ದಿ: ಜಮೀನು ಕಾಗದಪತ್ರಗಳನ್ನು ನೀಡಲು ಹಣಕ್ಕೆ ಬೇಡಿಕೆ ಇಟ್ಟಿದ್ದ ತಹಶಿಲ್ದಾಅರ್ ಕಚೇರಿಯ ಎಫ್ ಡಿಎ ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ನಡೆದಿದೆ.
ಕಲಬುರಗಿ ಜಿಲ್ಲೆಯ ಕಮಲಾಪುರ ತಹಶಿಲ್ದಾರ್ ಕಚೇರಿಯ ಎಫ್ ಡಿಎ ಶಶಿಕುಮಾರ್ ಲೋಕಾಯುಕ್ತ ಬಲೆಗೆ ಬಿದ್ದವರು. ಜಮೀನು ದಾಖಲೆ ನೀಡುವುದಕ್ಕೆ ಎಫ್ ಡಿಎ ಶಶಿಕುಮಾರ್ ಕಿಶನ್ ರಾಠೋಡ್ ಎಂಬುವವರಿಗೆ ಲಂಚಕ್ಕೆ ಬೇಡಿಕೆ ಇಟ್ಟಿದ್ದರು.
10 ಸಾವಿರ ರೂಪಾಯಿ ಲಂಚದ ಹಣ ಪಡೆಯುತ್ತಿದ್ದಾಗಲೇ ಲೋಕಾಯುಕ್ತ ಅಧಿಕಾರಿಗಳು ದಾಲಿ ನಡೆಸಿ ಶಶಿಕುಮಾರ್ ಅವರನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ.




