Kannada NewsKarnataka NewsLatest
ಉದ್ಯಮಿ ಆರ್.ಎನ್.ನಾಯಕ್ ಹತ್ಯೆ: ಬನ್ನಂಜೆ ರಾಜಾ ಸೇರಿ 9 ಜನ ಅಪರಾಧಿಗಳು

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಅಂಕೋಲಾದ ಉದ್ಯಮಿ ಆರ್.ಎನ್.ನಾಯಕ ಹತ್ಯೆ ಪ್ರಕರಣದಲ್ಲಿ ಭೂಗತ ಪಾತಕಿ ಬನ್ನಂಜೆ ರಾಜಾ ಮತ್ತು 8 ಜನರು ಅಪರಾಧಿಗಳು ಎಂದು ಬೆಳಗಾವಿಯ ಕೋಕಾ ನ್ಯಾಯಾಲಯ ತೀರ್ಪು ನೀಡಿದೆ.
ನಾಲ್ವರನ್ನು ಪ್ರಕರಣದಿಂದ ನಿರ್ದೋಷಿಗಳು ಎಂದು ಕೈ ಬಿಡಲಾಗಿದೆ.
2013ರ ಡಿಸೆಂಬರ್ 21ರಂದು ಆರ್.ಎನ್ ನಾಯಕ ಅವರನ್ನು ಹತ್ಯೆ ಮಾಡಲಾಗಿತ್ತು.
ನ್ಯಾಯಾಧೀಶ ಸಿ.ಎಂ.ಜೋಶಿ ತೀರ್ಪು ನೀಡಿದ್ದು, ಶಿಕ್ಷೆಯ ಪ್ರಮಾಣವನ್ನು ಏಪ್ರಿಲ್ 4ರಂದು ನ್ಯಾಯಾಲಯ ಪ್ರಕಟಿಸಲಿದೆ.
ಫೋಟೋ ಪಡೆದು ಯುವತಿಯರಿಗೆ ಬ್ಲ್ಯಾಕ್ ಮೇಲ್; ಆರೋಪಿ ಅರೆಸ್ಟ್




