National

*ಮರ್ಡರ್ ಮಾಡಿ ಶವ ಹೂಳುವಾಗ ಸಿಕ್ಕಿಬಿದ್ದ ಆರೋಪಿಗಳು *

ಪ್ರಗತಿವಾಹಿನಿ ಸುದ್ದಿ: ಮಹಿಳೆಯನ್ನು ಕೊಲೆ ಮಾಡಿ, ಹೈವೇ ಪಕ್ಕದಲ್ಲಿ ಗುಂಡಿ ತೋಡಿ ಹೂಳುತ್ತಿದ ಆರೋಪಿಗಳನ್ನು ಹೈವೇ ಪೆಟ್ರೋಲಿಂಗ್ ಪೊಲೀಸರು ಬಂಧಿಸಿದ್ದಾರೆ.‌

ತಮಿಳುನಾಡಿನ ದಿಂಡಿಗಲ್ ಜಿಲ್ಲೆಯಲ್ಲಿ ಹೆದ್ದಾರಿ ಗಸ್ತು ತಿರುಗುತ್ತಿದ್ದ ಪೊಲೀಸರು ಆರೋಪಿಗಳಾದ ದಿವಾಕರ್ ಮತ್ತು ಆತನ ಸಂಬಂಧಿ ಇಂದ್ರಕುಮಾರ್ ಅವರನ್ನು ಬಂಧಿಸಿದ್ದಾರೆ. 27 ವರ್ಷದ ಪ್ರಿನ್ಸಿ ಎಂಬ ಮಹಿಳೆಯು ತಿರುಪ್ಪೂರ್‌ನ ಖಾಸಗಿ ಮಿಲ್‌ನಲ್ಲಿ ಕೆಲಸ ಮಾಡುತ್ತಿದ್ದು, ಆರಂಭಿಕ ತನಿಖೆಯ ಪ್ರಕಾರ ದಿವಾಕರ್ ಪ್ರಿನ್ಸಿಯೊಂದಿಗೆ ಸಂಬಂಧ ಹೊಂದಿದ್ದ. ಮಹಿಳೆಗೆ ಚಿನ್ನಾಭರಣ, ಹಣ ಸೇರಿದಂತೆ ನೀಡಿದ್ದ ಉಡುಗೊರೆಗಳನ್ನು ವಾಪಸ್ ನೀಡುವಂತೆ ಒತ್ತಾಯಿಸಿದ್ದ.

ಮಹಿಳೆ ಚಿನ್ನಾಭರಣಗಳನ್ನು ನೀಡದೇ ಹೋದಾಗ ದಿವಾಕರ್ ಆಕೆಯನ್ನು ಕತ್ತು ಹಿಸುಕಿ ಕೊಂದಿದ್ದಾನೆ. ನಂತರ ಇಂದ್ರಕುಮಾರ್‌ ನೊಂದಿಗೆ ಸೇರಿ ಶವವನ್ನು ಕಾರಿನಲ್ಲಿ ಸಾಗಿಸಿದ್ದಾರೆ. ಮಧುರೈ ಬಳಿ ಪ್ರಿನ್ಸಿ ಶವವನ್ನು ಹೂಳಲು ಇಬ್ಬರೂ ಯತ್ನಿಸಿದ್ದಾರೆ. ಇಬ್ಬರನ್ನು ಇದೀಗ ಬಂಧಿಸಿರುವ ಪೊಲೀಸರು ಹೆಚ್ಚಿನ ತನಿಖೆಯನ್ನು ನಡೆಸಲಾಗುತ್ತಿದೆ.

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button