Kannada NewsKarnataka NewsLatest

*ಯುವ ದಸರಾ ಉದ್ಘಾಟಕರಾಗಿ ಪ್ರಭುದೇವಗೆ ಅಧಿಕೃತ ಆಹ್ವಾನ*

ಪ್ರಗತಿವಾಹಿನಿ ಸುದ್ದಿ: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ದಿನಗಣನೆ ಆರಂಭವಾಗಿದೆ. ಈ ಬಾರಿಯ ಯುವ ದಸರಾ ಉದ್ಘಾಟಕರಾಗಿ ನೃತ್ಯ ನಿರ್ದೇಶಕ, ನಟ ಪ್ರಭುದೇವ ಅವರನ್ನು ಆಯ್ಕೆ ಮಾಡಲಾಗಿದೆ.

ಯುವ ದಸರಾ ಉದ್ಘಾಟಕರಾಗಿ ಪ್ರಭುದೇವ ಅವರಿಗೆ ಮೈಸೂರು ಜಿಲ್ಲಾಡಳಿತ ಹಾಗೂ ಯುವ ದಸರಾ ಸಮಿತಿ ಇಂದು ಅಧಿಕೃತವಾಗಿ ಆಹ್ವಾನ ನೀಡಿದೆ. ಚೆನ್ನೈನ ಪ್ರಭುದೇವ ಅವರ ನಿವಾಸಕ್ಕೆ ಭೇಟಿ ನೀಡಿದ ಸಮಿತಿ ಅಧಿಕಾರಿಗಳು, ಪ್ರಭುದೇವ ಅವರುಗೆ ಪೇಟಾ ತೊಡಸಿ, ಶಾಲು-ಹೂವಿನ ಹಾರ ಹಾಕಿ ಗೌರವಪೂರ್ವಕವಾಗಿ ಆಹ್ವಾನ ನೀಡಿದರು.

Home add -Advt

ಮೈಸೂರು ದಸರಾದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮವಾಗಿ ಯುವ ದಸರಾ ಒಂದು ಪ್ರಮುಖ ಆಕರ್ಷಣೆಯಾಗಿದೆ. ಈ ಕಾರ್ಯಕ್ರಮದಲ್ಲಿ ಸಿನಿ ಕಲಾವಿದರು, ಖ್ಯಾತ ಗಾಯಕರು, ನೃತ್ಯಗಾರರು ಪಾಲ್ಗೊಂಡು ಯುವಜನತೆಯನ್ನು ಮನರಂಜಿಸುತ್ತಾರೆ.

Related Articles

Back to top button