Latest

ನೂತನ ಮುಖ್ಯಮಂತ್ರಿಯಿಂದ ಮಹತ್ವದ ಘೋಷಣೆ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿರುವ ಬಸವರಾಜ್ ಬೊಮ್ಮಾಯಿ ಹಲವು ಮಹತ್ವದ ಯೋಜನೆಗಳನ್ನು ಘೋಷಣೆ ಮಾಡಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿದ ಬೊಮ್ಮಾಯಿ, ರೈತರ ಮಕ್ಕಳಿಗೆ ಹೊಸ ಶಿಷ್ಯ ವೇತನ ಘೋಷಣೆ ಮಾಡಿದ್ದಾರೆ.

Home add -Advt

ರೈತರ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು. ಉನ್ನತ ಶಿಕ್ಷಣಕ್ಕೆ ಅವರಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಹಾಗೂ ಶಿಷ್ಯ ವೇತನಕ್ಕಾಗಿ 1000 ಕೋಟಿ ಅನುದಾನ ಮೀಸಲಿಡುವುದಾಗಿ ತಿಳಿಸಿದರು.

ಸಂಧ್ಯಾ ಸುರಕ್ಷಾ ಯೋಜನೆ ವೇತನ ಹೆಚ್ಚಿಸಿದ್ದು, 1000ರೂಪಾಯಿಯಿಂದ 1200ರೂಪಾಯಿಗೆ ಹೆಚ್ಚಳ ಮಾಡಲಾಗಿದೆ. ವಿದವಾವೇತನ 600ರಿಂದ 800 ರೂ ಹಾಗೂ ಶೇ.60-75ರಷ್ಟು ಅಂಗವಿಕಲವಿರುವವರಿಗೆ ಅಂಗವಿಕಲರ ವೇತನ ಯೋಜನೆಯಡಿ 600-800ರೂ ಗೆ ಹೆಚ್ಚಳ ಮಾಡಲಾಗಿದೆ ಎಂದರು.
ಮೊದಲ ಸಭೆಯಲ್ಲೇ ಅಧಿಕಾರಿಗಳಿಗೆ ನೂತನ ಸಿಎಂ ಖಡಕ್ ವಾರ್ನಿಂಗ್

Related Articles

Back to top button