Kannada NewsKarnataka NewsLatest

*ಈ ಬಾರಿ ದೇಶಕ್ಕೆ ಮಹಿಳೆ ಪ್ರಧಾನಿ: ಭವಿಷ್ಯ ನುಡಿದ ನೊಣವಿನಕೆರೆ ಯಶ್ವಂತ ಗುರೂಜಿ*

ಪ್ರಗತಿವಾಹಿನಿ ಸುದ್ದಿ: ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದು, ರಾಜಕೋಯ ಪಕ್ಷಗಳು ಗೆಲುವಿಗಾಗಿ ಭರ್ಜರಿ ಸಿದ್ಧತೆ ನಡೆಸಿದ್ದಾರೆ. ಈ ನಡುವೆ ನೊಣವಿನಕೆರೆ ಸ್ವಾಮೀಜಿಯೋರ್ವರು ಈ ಬಾರಿ ದೇಶಕ್ಕೆ ಮಹಿಳಾ ಪ್ರಧಾನಿ ಎಂದು ಹೇಳುವ ಮೂಲಕ ಕುತೂಹಲಕಾರಿ ಭವಿಷ್ಯ ನುಡಿದಿದ್ದಾರೆ.

ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ನೊಣವಿನಕೆರೆ ಯಶ್ವಂತ ಗುರೂಜಿ ಈ ಬಾರಿ ದೇಶಕ್ಕೆ ಮಹಿಳೆಯೊಬ್ಬರು ಪ್ರಧಾನಿ ಆಗಲಿದ್ದಾರೆ ಎಂದುಕಾಲಜ್ಞಾನದ ಭವಿಷ್ಯ ನುಡಿದಿದ್ದಾರೆ.

ಶಿವರಾತ್ರಿಗೂ ಮುನ್ನ ಲೋಕಸಭಾ ಚುನಾವಣೆಯಾಗಿದ್ದರೆ ನರೇಂದ್ರ ಮೋದಿಯವರೆ ಮತ್ತೆ ಪ್ರಧಾನಿಯಾಗುವ ಯೋಗವಿತ್ತು. ಆದರೆ ಈಗ ಮೋದಿಯವರಿಗೆ ಆ ಯೋಗವಿಲ್ಲ ಎಂದು ತಿಳಿಸಿದ್ದಾರೆ. ಈ ಬಾರಿ ಸ್ತ್ರೀ ದುರ್ಗೆಯಂತೆ ಪುರುಷನಿಗೆ ಭಯ ಹುಟ್ಟಿಸಿ ಅಧಿಕಾರ ನಡೆಸಲಿದ್ದಾಳೆ ಎಂದು ಹೇಳಿದ್ದಾರೆ.

ಈ ಕಾಂಗ್ರೆಸ್ ದೇಶದ ಚುಕ್ಕಾಣಿ ಹಿಡಿಯಲಿದೆ. ಪ್ರಿಯಾಂಕಾ ಗಾಂಧಿ ಪ್ರಧಾನಿಯಾಗಲಿದ್ದಾರೆ. ಸಧ್ಯ ಪ್ರಿಯಾಂಕಾ ಗಾಂಧಿಗೆ ಹಂಸಕ, ಚಂದ್ರಮಂಗಳ,ಬುಧಾಧಿತ್ಯಯೋಗ ಆರಂಭವಾಗಿದೆ. ಈ ಯೋಗದಿಂದಲೇ ಪ್ರಧಾನಿ ಪಟ್ಟ ಸಿಗಲಿದೆ ಎಂದು ಶಿವರಾತ್ರಿಯ ಕಾಲಜ್ಞಾನ ಭವಿಷ್ಯ ಹೇಳಿದ್ದಾರೆ.

ಯಶ್ವಂತ ಗುರೂಜಿ ಕರ್ನಾಟಕ ವಿಧಾನಸಭೆ ಚುನಾವಣೆಗೂ ಮುನ್ನ ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ. 135 ಸೀಟು ಗೆಲ್ಲಲಿದೆ ಎಂದು ಭವಿಷ್ಯ ನುಡಿದಿದ್ದರು. ಅಲ್ಲದೇ ಕೊರೊನಾ ಸೊಂಕಿನ ಬಗ್ಗೆ ಹಾಗೂ ತೆಲಂಗಾಣದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದು ಹೇಳಿದ್ದರು. ಯಶ್ವಂತ ಗುರೂಜಿಯ ಈ ಭವಿಷ್ಯಗಳು ನಿಖರವಾಗಿವೆ. ಇದೀಗ ಈ ಬಾರಿ ದೇಶಕ್ಕೆ ಮಹಿಳೆ ಪ್ರಧಾನಿಯಾಗಲಿದ್ದಾರೆ ಎಂದು ಹೇಳಿದ್ದು, ಯಶ್ವಂತ ಗುರೂಜಿಯವರ ಈ ಭವಿಷ್ಯವಾಣಿ ನಿಜವಾಗಲಿದೆಯೇ? ಕಾದುನೋಡಬೇಕಿದೆ.


Related Articles

Back to top button