Belagavi NewsBelgaum NewsKannada NewsKarnataka NewsLatest

*ಬೆಳಗಾವಿಯಲ್ಲಿ ಮತ್ತೊಂದು ಘೋರ ಘಟನೆ: ತಂದೆಯ ದುಡಿಮೆ ಹಣ ಕೇಳಿದ್ದಕ್ಕೆ ಬಾಲಕಿ ಮೇಲೆ ಮಾಲೀಕನಿಂದ ಹಲ್ಲೆ?*

ಪ್ರಗತಿವಾಹಿನಿ ಸುದ್ದಿ: ತಂದೆ ದುಡಿದ ಹಣವನ್ನು ಕೇಳಿದ್ದಕ್ಕೆ ಮಗಳ ಮೇಲೆ ಥಳಿಸಿರುವ ಘಟನೆ ಬೆಳಗಾವಿ ತಾಲೂಕಿನ ಕಾಕತಿ ಗ್ರಾಮದಲ್ಲಿ ನಡೆದಿದೆ.

ಅರ್ಜುನ್ ಎಂಬುವವರು ಜೈ ಹನುಮಾನ್ ಬ್ಯಾಂಡ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ ಅರ್ಜುನ್ ಪುತ್ರಿ 17 ವರ್ಷದ ಬಾಲಕಿ ತಂದೆಯ ದುಡಿಮೆಯ ಹಣವನ್ನು ಕೇಳಿದ್ದಾರೆ.

ಹಣ ಕೇಳಿದ್ದಕ್ಕೆ ಕಂಪನಿ ಮಾಲೀಕರಾದ ಅಶೋಕ್ ಭಜಂತ್ರಿ ,ಕರೆಪ್ಪ ಭಜಂತ್ರಿ ಅವಾಚ್ಯವಾಗಿ ನಿಂದಿಸಿ ತಂದೆ- ಮಗಳ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.

Home add -Advt

ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡಿರುವ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಬಾಲಕಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಬಾಲಕಿ ಪೋಷಕರು ಕಮಿಷ್ನರ್ ಗೆ ದೂರು ನೀಡಿದ್ದಾರೆ.


ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button