
ಪಠಾಣ್ ಕೋಣ್, ಅಮೃತಸರ್ ವಾಯುನೆಲೆ ಮೇಲೆ ಪಾಕ್ ದಾಳಿ
ಪ್ರಗತಿವಾಹಿನಿ ಸುದ್ದಿ: ಭಾರತ-ಪಕಿಸ್ತಾನ ನಡುವೆ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದ್ದು, ಪಾಕಿಸ್ತಾನ ಸೇನೆ ಭಾರತದ ಹಲವು ನಗರಗಳ ಮೇಲೆ ದಾಳಿ ನಡೆಸುತ್ತಿದೆ.
ಪಾಕಿಸ್ತಾನ ಸೆನೆ ಪಠಾಣ್ ಕೋಟ್, ಅಮೃತಸರ್ ವಾಯುನೆಲೆ ಮೇಲೆ ಅಪ್ರಚೋದಿತ ಡ್ರೋನ್ ದಾಳಿ ನಡೆಸಿದ್ದು ಭಾರತೀಯ ಸೇನೆಯ ಸುದರ್ಶನ ಚಕ್ರ S-400, ಆಕಾಶ್ ಯುದ್ಧ ವಿಮಾನಗಳು ಪಾಕಿಸ್ತಾನದ 8 ಕ್ಷಿಪಣಿಗಳನ್ನು ಆಗಸದಲ್ಲಿಯೇ ಹೊಡೆದುರುಳಿಸಿವೆ.
ಜಮ್ಮುವಿನ ಯುನಿವರ್ಸಿಟಿ, ಜಮ್ಮು ಏರ್ ಪೋರ್ಟ್ ಬಳಿಯೂ ಪಾಕಿಸ್ತಾನ ದಾಳಿ ನಡೆಸಿದೆ. ಪಾಕಿಸ್ತಾನದ ದಾಳಿಗೆ ಭಾರತೀಯ ಸೇನೆ ಪ್ರತಿದಾಳಿ ನಡೆಸಿದೆ. ಪಾಕ್ ದಾಳಿಯಲ್ಲಿ ಯಾವುದೇ ಸಾವು-ನೋವು ವರದಿಯಾಗಿಲ್ಲ ಎಂದು ತಿಳಿದುಬಂದಿದೆ.
ಜಮ್ಮುವಿನಾದ್ಯಂತ ಯುದ್ಧದ ಸೈರನ್ ಮೊಳಗಿದ್ದು, ಜನರು ಭಯ-ಭೀತರಾಗಿದ್ದಾರೆ. ಪಾಕಿಸ್ತಾನದ ದಾಳಿ ತಡೆಯುವ ನಿಟ್ಟಿನಲ್ಲಿ ಜಮ್ಮುವಿನಾದ್ಯಂತ ಬ್ಲ್ಯಾಕ್ ಔಟ್ ಜಾರಿ ಮಾಡಲಾಗಿದೆ. ಈ ಮೂಲಕ ಸಂಪೂರ್ಣ ವಿದ್ಯುತ್ ಕಡಿತಗೊಳಿಸಲಾಗಿದ್ದು, ಮನೆಗಳ ಬಾಗಿಲು, ಕಿಡಕಿ ತೆರೆಯದಂತೆ ನಾಗರಿಕರಿಗೆ ಸೂಚನೆ ನೀಡಲಾಗಿದೆ. ಇದರ ಬೆನ್ನಲ್ಲೇ ಭಾರತದಾದ್ಯಂತ ಹೈ ಅಲರ್ಟ್ ಘೋಷಿಸಲಾಗಿದೆ.