Karnataka NewsLatest
ಸಿಎ ಪರೀಕ್ಷೆಯಲ್ಲಿ ತೇರ್ಗಡೆ

ಎಚ್.ವಿ.ಆದರ್ಶ
ಪ್ರಗತಿವಾಹಿನಿ ಸುದ್ದಿ, ಸಿದ್ದಾಪುರ – ಹೇರೂರು ಸಮೀಪದ ಹೊಳ್ಳೆಡೆಯ ವಿಶ್ವನಾಥ ಹೆಗಡೆ ಮತ್ತು ಮಂಗಲಾ ಹೆಗಡೆ ಪುತ್ರ ಎಚ್.ವಿ.ಆದರ್ಶ ಮೊದಲ ಪ್ರಯತ್ನದಲ್ಲೆ ಸಿಎ ಪಾಸ್ ಆಗಿದ್ದಾರೆ.
ಆದರ್ಶನ ಸಹೋದರಿ ಎಚ್.ವಿ.ಅರ್ಚನಾ ಈಗಾಗಲೇ ಸಿಎ ತೇರ್ಗಡೆ ಹೊಂದಿ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಆಕೆಯೂ ಮೊದಲ ಪ್ರಯತ್ನದಲ್ಲೆ ಪಾಸಾಗಿದ್ದರು. ಅಕ್ಕ, ತಮ್ಮ ಇಬ್ಬರೂ ಪ್ರತಿಭಾವಂತರು.




