LatestUncategorized

*ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ನವರಂಗಿ ಆಟ ಆಡ್ತಿದ್ದಾರೆ; ಪ್ರತಾಪ್ ಸಿಂಹ ಆಕ್ರೋಶ*

ಪ್ರಗತಿವಾಹಿನಿ ಸುದ್ದಿ; ಮೈಸೂರು: ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆಯಲ್ಲಿ ಬಜರಂಗದಳ ಬ್ಯಾನ್ ಮಾಡುವುದಾಗಿ ಘೋಷಿಸಿರುವ ಬಗ್ಗೆ ಪ್ರತಿಕ್ರಿಯಿಸಿರುವ ಸಂಸದ ಪ್ರತಾಪ್ ಸಿಂಹ, ವಿಪಕ್ಷ ನಾಯಕ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ನವರಂಗಿ ಆಟ ಆದ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದ ಪ್ರತಾಪ್ ಸಿಂಹ, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ತಾಲಿಬಾನ್ ಸರ್ಕಾರ ರಚನೆ ಆಗುತ್ತೆ. ಒಸಾಮಾಬಿನ್ ಲಾಡೆನ್, ಮುಲ್ಲಾ ಉಮಾರ್ ನೇತೃತ್ವದಲ್ಲಿ ತಾಲಿಬಾನ್ ಸರ್ಕಾರ ಬರುತ್ತೆ. ಮುಂದೆ ಘಜ್ನಿ ಮಹಮ್ಮದ್, ಟಿಪ್ಪು ಸುಲ್ತಾನ್ ವೈಭವೀಕರಿಸುವ ಪಠ್ಯ ಬರುತ್ತದೆ ಎಂದು ಕಿಡಿಕಾರಿದರು.

Home add -Advt

ಸಿದ್ದರಾಮಯ್ಯ ಹಾಗೂ ದಿ.ಕೆ.ಶಿವಕುಮಾರ್ ಅವರ ನವರಿಂಗಿ ಆಟಗಳು ಜನರಿಗೆ ಅರ್ಥವಾಗುತ್ತದೆ. ಇದು ಹೆಚ್ಚು ದಿನ ನಡೆಯಲ್ಲ. ಚುನಾವಣೆಯಲ್ಲಿ ಜನರು ತಕ್ಕ ಪಾಠ ಕಲಿಸುತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಜರಂಗದಳ ನಿಷೇಧಿಸುವುದಾಗಿ ಹೇಳ್ತೀರಾ? ಬಜರಂಗಿ ಶ್ರೀ ರಾಮನಿಗಾಗಿ ಸೀತೆಯನ್ನು ಹುಡುಕಿಕೊಂಡು ಹೋದ, ರಾಮನಿಗಾಗಿ ಪರ್ವತವನ್ನೇ ಎತ್ತಿಕೊಂಡು ಬಂದ. ಕರ್ನಾಟಕದ ಬಜರಂಗಿಗಳು, ಹಿಂದೂತ್ವಕ್ಕಾಗಿ, ಗೋ ಮಾತೆಗಾಗಿ ಅದೇ ಪರ್ವತದಡಿ ಕಾಂಗ್ರೆಸ್ ನ್ನು ಹೊಸಕಿ ಹಾಕಿಬಿಡುತ್ತಾರೆ ಹುಷಾರ್ ಎಂದು ಗದರಿದ್ದಾರೆ.

https://pragati.taskdun.com/b-s-yedyurappasiddaraaiahv-somannavaruna/

Related Articles

Back to top button