Kannada NewsKarnataka News

ಖಾನಾಪುರ ಕುಗ್ರಾಮಗಳಲ್ಲಿ ಪ್ರಧಾನಿ ಮೋದಿಯವರ ಜನ್ಮದಿನ: ಸೇವಾ ಹಿ ಸಮರ್ಪಣ್ ಅಭಿಯಾನ್

 

Home add -Advt

ಪ್ರಗತಿವಾಹಿನಿ ಸುದ್ದಿ, ಕಕ್ಕೇರಿ:  ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನವನ್ನು ಘಸ್ಟೋಳಿ, ಚನಕಬೈಲ, ಶಿವಾಜಿ ನಗರ, ಕಲ್ಮೇಶ್ವರ ನಗರ, ಲಿಂಗಮಠ ಹಾಗೂ ಕಕ್ಕರಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಆಚರಿಸಲಾಯಿತು.

ಈ ಸಮಯದಲ್ಲಿ ಜಿಲ್ಲಾ ಮಹಿಳಾ ಮೋರ್ಚಾದ ಉಪಾಧ್ಯಕ್ಷೆ, ಖಾನಾಪುರ ಪ್ರಭಾರಿ, ನಿಯತಿ ಫೌಂಡೇಶನ್‌ ಚೇರಮನ್ ಡಾ.ಸೋನಾಲಿ ಸರ್ನೋಬತ್ ಅವರು ಬೋರ್ವಂಕಿ, ಕಕ್ಕೇರಿ ಮತ್ತು ಘಸ್ಟೋಳಿ  ಸಮೀಪದ ಎಲ್ಲಾ ಗ್ರಾಮಗಳಿಗೆ ಭೇಟಿ ನೀಡಿದರು. ಈ ಪ್ರದೇಶದ  ಸಮಸ್ಯೆಗಳ ಕುರಿತು ಅವರು ಗ್ರಾಮಸ್ಥರೊಂದಿಗೆ ಚರ್ಚಿಸಿದರು.

ಶಾಲೆ, ರಸ್ತೆ ಮತ್ತು ಪ್ರಾಥಮಿಕ ಆರೋಗ್ಯ ರಕ್ಷಣೆಗೆ ಗಮನ ನೀಡಬೇಕಾಗಿದ್ದು, ಡಾ.ಸರ್ನೋಬತ್ ಅವರು ಗ್ರಾಮಸ್ಥರ ಸಮಸ್ಯೆಗಳನ್ನು ಆದಷ್ಟು ಬೇಗ ಪರಿಹರಿಸಲಾಗುವುದು ಎಂದು ಭರವಸೆ ನೀಡಿದರು.

ಗ್ರಾಮ ಪಂಚಾಯತ್ ಅಧ್ಯಕ್ಷ ಭೀಮಪ್ಪ ಅಂಬೋಜಿ, ಬಸವರಾಜ ಕೊಡೆಮನಿ, ಈಶ್ವರ ಸಾಣಿಕೊಪ್ಪ, ಪ್ರಗತಿಪರ ರೈತ ಪರಶುರಾಮ ಬಿರ್ಜಿ, ಸಂತೋಷ್ ಕುಕದೊಳ್ಳಿ, ಕುಶ್ ಅಂಬೋಜಿ, ನಾಗೇಶ್ ರಾಮಾಜಿ ಮೊದಲಾದವರು ಹಾಜರಿದ್ದರು.
ಸೇವಾ ಹಿ ಸಮರ್ಪಣ್ ಅಭಿಯಾನವನ್ನು ಸೆಪ್ಟೆಂಬರ್ 17, ಮೋದಿಜಿಯವರ ಜನ್ಮದಿನದಿಂದ ಅಕ್ಟೋಬರ್ 7 ರವರೆಗೆ ಯೋಜಿಸಲಾಗಿದೆ. ಭಾರತೀಯ ಜನತಾ ಪಾರ್ಟಿಯಿಂದ ವಿವಿಧ ಜನರ ಪರ ಅಭಿಯಾನವನ್ನು ಯೋಜಿಸಲಾಗಿದೆ.

ಬೆಳಗಾವಿ: ಸಮರಸತಾಭವನ ಸ್ಲ್ಯಾಬ್ ಪೂಜೆ

Related Articles

Back to top button