Kannada NewsKarnataka NewsLatest

ನಾಳೆಯಿಂದ ರೈಲ್ವೆ ಸೇವೆ ಪುನಾರಂಭ -ಸುರೇಶ ಅಂಗಡಿ ಮಾಹಿತಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಕೊರೋನಾ ಹಿನ್ನೆಲೆಯಲ್ಲಿ ಸ್ಥಗಿತವಾಗಿದ್ದ ರೈಲ್ವೆ ಸೇವೆ ಮೇ 12ರಿಂದ ಪುನಾರಂಭವಾಗಲಿದೆ. ಆದರೆ ಮೊದಲ ಹಂತದಲ್ಲಿ ಕೇವಲ 15 ಜೋಡಿ ರೈಲುಗಳು ಆರಂಭವಾಗಲಿವೆ.

ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಸುದ್ದಿಗಾರರಿಗೆ ಈ ಕುರಿತು ಮಾಹಿತಿ ನೀಡಿದರು.

Home add -Advt

ನಾಳೆ ರಾಜಧಾನಿ ನವದೆಹಲಿಯಿಂದ ಬೆಂಗಳೂರು ಸೇರಿದಂತೆ ವಿವಿಧ ರಾಜ್ಯಗಳಿಗೆ ಹೊರಡಲಿದೆ. ಆನ್ ಲೈನ್ ನಲ್ಲಿ ಮಾತ್ರ ಟಿಕೆಟ್ ಬುಕ್ಕಿಂಗ್ ವ್ಯವಸ್ಥೆ ಇರುತ್ತದೆ. ಪ್ಲ್ಯಾಟ್ ಫಾರ್ಮ್ ಟಿಕೆಟ್ ಆಗಲಿ, ರೈಲ್ವೆ ನಿಲ್ದಾಣದಲ್ಲಿ ಪ್ರಯಾಣದ ಟಿಕೆಟ್ ಮಾರಾಟವಾಗಲಿ ಸಧ್ಯಕ್ಕೆ ಇರುವುದಿಲ್ಲ.

ಜನರು ಆನ್ ಲೈನ್ ನಲ್ಲಿ ಬುಕ್ಕಿಂಗ್ ಮಾಡಿ, ಕನ್ಫರ್ಮ್ ಆದರಷ್ಟೆ ರೈಲ್ವೆ ನಿಲ್ದಾಣಕ್ಕೆ ಬರಬೇಕು. ಪ್ರಯಾಣಿಕರು ಮಾತ್ರ ಬರಲು ಅವಕಾಶವಿದೆ. ಸಾಮಾಜಿ ಅಂತರ ಕಾಯ್ದುಕೊಂಡು, ಮಾಸ್ಕ್ ಧರಿಸಿ ಬರಬೇಕು ಎಂದು ಅಂಗಡಿ ತಿಳಿಸಿದರು.

ರೈಲು ಹತ್ತುವಾಗಿ ಪ್ರತಿ ಪ್ರಯಾಣಿಕರ ಆರೋಗ್ಯ ತಪಾಸಣೆ ಮಾಡಲಾಗುತ್ತದೆ. ಶಂಕಿತರನ್ನು ರೈಲಿನೊಳಗೆ ಬಿಡುವುದಿಲ್ಲ ಎಂದೂ ಅವರು ತಿಳಿಸಿದರು.

ಮೊದಲ ಹಂತದ ರೈಲ್ವೆ ಆರಂಭವಾದ ನಂತರ ರೆಸ್ಪಾನ್ಸ್ ನೋಡಿ ಹೆಚ್ಚಿನ ರೈಲ್ವೆ ಆರಂಭಿಸುವ ಬಗ್ಗೆ ತೀರ್ಮಾನಿಸಲಾಗುವುದು ಎಂದರು.

Related Articles

Back to top button