Kannada NewsKarnataka NewsLatest

ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ: ಶುಕ್ರವಾರ ಪಾದಯಾತ್ರೆ, ರಸ್ತೆ ತಡೆ

 ಪ್ರಗತಿವಾಹಿನಿ ಸುದ್ದಿ, ಗೋಕಾಕ – ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಶುಕ್ರವಾರ ಅವರ ಅಭಿಮಾನಿಗಳು ಪ್ರತಿಭಟನೆ ನಡೆಸಿ, ರಸ್ತೆ ತಡೆ ನಡೆಸಲು ನಿರ್ಧರಿಸಿದ್ದಾರೆ.
 ನಕಲಿ ಸಿಡಿ ತಯಾರಿಸಿ ರಮೇಶ್ ಜಾರಕಿಹೊಳಿ ಅವರ ತೆಜೋವಧೆ ಮಾಡಲಾಗಿದೆ ಎಂದು ಆರೋಪಿಸಿರುವ ಅವರ ಅಭಿಮಾನಿಗಳು ಈ ಸಂಬಂಧ ದಿನೇಶ ಕಲ್ಲಹಳ್ಳಿ ವಿರುದ್ಧ ಶುಕ್ರವಾರ  ಪ್ರತಿಭಟನೆ ನಡೆಸಲಿದ್ದಾರೆ.
 ತಾಲೂಕಿನ ಕೊಣ್ಣೂರ ಪುರಸಭೆ ಆವರಣ (ಮರಡಿಮಠ ಕ್ರಾಸ್)  ದಿಂದ ಬೆಳಿಗ್ಗೆ 9ಗಂಟೆಗೆ ಸಾವಿರಾರು ಕಾರ್ಯಕರ್ತರು ಪ್ರತಿಭಟನಾ ಮೆರವಣಿಗೆ (ಪಾದಯಾತ್ರೆ) ಮೂಲಕ ಡಿವೈಎಸ್ ಪಿ ಕಾರ್ಯಾಲಯದವರೆಗೆ ಆಗಮಿಸಿ ಮನವಿ ಸಲ್ಲಿಸಲಿದ್ದಾರೆ.
 ಅಭಿಮಾನಿಗಳ ಇನ್ನೊಂದು ಗುಂಪು ತಾಲೂಕಿನ ಮಾಲದಿನ್ನಿ (ಬೆಳಗಾವಿ ಕ್ರಾಸ್) ಕ್ರಾಸ್ ಬಳಿ ಬೆಳಿಗ್ಗೆ 10ಗಂಟೆಗೆ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಲಿದ್ದಾರೆ.
ಬುಧವಾರ ಗೋಕಾಕಲ್ಲಿ, ಗುರುವಾರ ಬೆಳಗಾವಿಯಲ್ಲಿ ಹಾಗೂ ಕೌಜಲಗಿಯಲ್ಲಿ ಅಭಿಮಾನಿಗಳು ಪ್ರತಿಭಟನೆ ನಡೆಸಿದ್ದಾರೆ.
ಈ ಮಧ್ಯೆ ರಮೇಶ ಜಾರಕಿಹೊಳಿ ಯಾವುದೇ ರೀತಿಯ ಹಿಂಸಾತ್ಮಕ ಪ್ರತಿಭಟನೆ ನಡೆಸದಂತೆ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ ಎಂದು ಬಿಜೆಪಿ ಗೋಕಾಕ ನಗರಾಧ್ಯಕ್ಷ ಭೀಮಶಿ ಭರಮಣ್ಣವರ್ ಪ್ರಗತಿವಾಹಿನಿಗೆ ತಿಳಿಸಿದ್ದಾರೆ.

ದಯವಿಟ್ಟು ಕ್ಷಮಿಸಿ: ಪ್ರಗತಿವಾಹಿನಿ ಓದುಗರಲ್ಲಿ ಕ್ಷಮೆ ಯಾಚನೆ

ರಮೇಶ್ ಜಾರಕಿಹೊಳಿ ವಿರುದ್ಧ ಮತ್ತೊಂದು ದೂರು ದಾಖಲು

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button