ಬೆಳಗಾವಿಗೆ ಬೇಕಿದೆ 50 ವರ್ಷ ಮುಂದಿನ ಗುರಿ – ಶಾಸಕಿ ಲಕ್ಷ್ಮೀ ಹೆಬ್ಬಾಳಕರ್

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – 50 ವರ್ಷ ಮುಂದಿನ ಗುರಿಯಿಟ್ಟುಕೊಂಡು ಬೆಳಗಾವಿಯನ್ನು ಬೆಳೆಸಬೇಕಿದೆ. ಅದಕ್ಕಾಗಿ ಈಗಲೇ ಯೋಜನೆ ರೂಪಿಸಬೇಕಾಗಿದೆ ಎಂದು ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ಶನಿವಾರ ಕನ್ನಡಪ್ರಭ ಬೆಳಗಾವಿ ಆವೃತ್ತಿಯ ರಜತಮಹೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು. ಕನ್ನಡ ಪ್ರಭ, ಸುವರ್ಣ ನ್ಯೂಸ್ ಪ್ರಧಾನ ಸಂಪಾದಕ ರವಿ ಹೆಗಡೆ ಅವರ ಪ್ರಾಸ್ತಾವಿಕ ಮಾತುಗಳನ್ನು ವಿಸ್ತರಿಸಿ ಮಾತನಾಡಿದ ಲಕ್ಷ್ಮೀ ಹೆಬ್ಬಾಳಕರ್, ಬೆಂಗಳೂರಿನಲ್ಲಿ ಆಗುತ್ತಿರುವ ಅಧ್ವಾನಗಳು ಬೆಳಗಾವಿಯಲ್ಲಿ ಆಗಬಾರದೆಂದರೆ ಈಗಲೇ ಯೋಚಿಸಬೇಕಾಗಿದೆ. ಇದಕ್ಕಾಗಿ ನನ್ನಿಂದ ಏನು ಸಾಧ್ಯವೋ ಅದನ್ನು ಮಾಡಲು ಸಿದ್ಧ ಎಂದು ಹೇಳಿದರು.
ನನ್ನನ್ನು ನಿರಂತವಾಗಿ ತಿದ್ದಿತೀಡುವ ಕಾರ್ಯವನ್ನು ಕನ್ನಡಪ್ರಭ ನಿರಂತರವಾಗಿ ಮಾಡಿದೆ. ಪತ್ರಿಕೆಯ ಯಾವುದೋ ಒಂದು ಸುದ್ದಿಯಲ್ಲಿ ನಾನು ಉಪಸ್ಥಿತಳಿದ್ದೆ ಎಂಬ ಉಲ್ಲೇಖವನ್ನು ಕಂಡು ಸಂಭ್ರಮಿಸುತ್ತಿದ್ದ ನಾನು, ಇಂದು ಕನ್ನಡಪ್ರಭ ಬೆಳಗಾವಿ ಆವೃತ್ತಿಯ ರಜತೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿರುವುದು ಸಂತಸ ತಂದಿದೆ ಎಂದು ಅವರು ಹೇಳಿದರು.

ಬೆಳಗಾವಿ ಜಿಲ್ಲಾ ಉಸ್ತುವಾರಿ ಹಾಗೂ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಮಾತನಾಡಿ, ಅತ್ಯಂತ ಸೂಕ್ಷ್ಮ ಸಂವೇದನೆಯುಳ್ಳ ಗಡಿ ಜಿಲ್ಲೆ ಬೆಳಗಾವಿಯಲ್ಲಿ ಭಾಷೆ ಹಾಗೂ ಗಡಿಗೆ ಸಂಬಂಧಪಟ್ಟ ವಿವಾದಗಳು ಉಚ್ಛ್ರಾಯವಾಗಿದ್ದ ಸಂದರ್ಭದಲ್ಲಿ ಬೆಳಗಾವಿಯಲ್ಲಿ ತನ್ನ ಆವೃತ್ತಿಯನ್ನು ಆರಂಭಿಸಿ ಕನ್ನಡ ಭಾಷೆ, ನೆಲ, ಜಲದ ಪರವಾಗಿ ದನಿ ಎತ್ತಿ ಕನ್ನಡಕ್ಕೆ ಶಕ್ತಿ ತುಂಬಿದ ಹಿರಿಮೆ ಕನ್ನಡಪ್ರಭದ್ದಾಗಿದೆ ಎಂದರು.
ವಿಶೇಷ ಅಂಚೆ ಲಕೋಟೆ ಬಿಡುಗಡೆ:
https://pragati.taskdun.com/belagavi-news/people-in-the-entire-constituency-are-happy-about-my-work-mla-lakshmi-hebbalkar/
https://pragati.taskdun.com/latest/haverikannada-sahiya-sammelanameetingdr-nadoja-mahesh-joshi/




