
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಪರಿಸರ ನಾಶದಿಂದಾಗಿ ಇಂದು ಹಲವಾರು ರೀತಿಯ ಅಪಾಯವನ್ನು ಎದುರಿಸುತ್ತಿದ್ದೇವೆ. ಪರಿಸರವನ್ನು ಉಳಿಸಿ, ಬೆಳೆಸುವ ಮೂಲಕ ಮಾನವ ಕುಲವನ್ನು ರಕ್ಷಿಸಬೇಕಾಗಿದೆ ಎಂದು ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಕರೆ ನೀಡಿದ್ದಾರೆ.

ಕೊರೋನಾ ಅಪಾಯದ ಇಂದಿನ ದಿನಗಳಲ್ಲಿ ಯಾರೂ ದೂರ ಹೋಗಿ ಗಿಡ ನೆಡಬೇಕಾಗಿಲ್ಲ. ಪ್ರತಿಯೊಬ್ಬರೂ ಅವರಿರುವ ಪರಿಸರದಲ್ಲಿಯೇ ಗಿಡನೆಡಬಹುದು. ಕೇವಲ ಒಂದು ದಿನಕ್ಕೆ ಇದನ್ನು ಸೀಮಿತಗೊಳಿಸದೆ ನಿರಂತರವಾಗಿ ನಾವು ಪರಿಸರ ಕಾಳಜಿ ಹೊಂದಿರಬೇಕು ಎಂದು ಲಕ್ಷ್ಮಿ ಹೆಬ್ಬಾಳಕರ್ ಕರೆ ನೀಡಿದರು.
ಚನ್ನರಾಜ ಹಟ್ಟಿಹೊಳಿ, ಯುವರಾಜ ಕದಂ, ಮೃಣಾಲ ಹೆಬ್ಬಾಳಕರ್ ಮೊದಲಾದವರು ಇದ್ದರು.