Latest

ಸಾವಿತ್ರಿ ಶಾಂತಯ್ಯ ಹಿರೇಮಠ ನಿಧನ

ಪ್ರಗತಿವಾಹಿನಿ ಸುದ್ದಿ; ಧಾರವಾಡ: ಸಾವಿತ್ರಿ ಶಾಂತಯ್ಯ ಹಿರೇಮಠ ಅವರು ಮಂಗಳವಾರ ಬೆಳಿಗ್ಗೆ ಧಾರವಾಡದಲ್ಲಿ ವಿಧಿವಶರಾಗಿದ್ದಾರೆ.

ಮೂಲತಃ ಬೆಳಗಾವಿ ಜಿಲ್ಲೆ ರಾಯಭಾಗ ತಾಲೂಕಿನ ಹಾರೋಗೆರಿ ಸಮಿಪ ಹಿಡಕಲ್ ಗ್ರಾಮದವರಾದ ಇವರು ಅನಾರೋಗ್ಯದಿಂದ ಧಾರವಾಡ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಬೆಳಿಗ್ಗೆ 7ಕ್ಕೆ ನಿಧನ ಹೊಂದಿದ್ದಾರೆ.

Home add -Advt

ಮೃತರು ಪತಿ ಶಾಂತಯ್ಯ ಹಿರೇಮಠ ಹಾಗೂ ಪತ್ರಕರ್ತ ಮಹಾಂತೇಶ ಹಿರೇಮಠ ಸೇರಿ ಮೂವರು ಪುತ್ರರನ್ನು ಅಗಲಿದ್ದಾರೆ.

ಬೆಳಗಾವಿ ಜಿಲ್ಲೆ ರಾಯಭಾಗ ತಾಲೂಕಿನ ಹಾರೋಗೇರಿ ಸಮೀಪದ ಹಿಡ್ಕಲ್ ಗ್ರಾಮದಲ್ಲಿ ಇಂದು ಮಧ್ಯಾಹ್ನ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಯುವತಿ ಹಿಂಬಾಲಿಸಿ ಅಸಭ್ಯ ವರ್ತನೆ; ಎಂ.ಎಸ್.ವಿದ್ಯಾರ್ಥಿ ಬಂಧನ

Related Articles

Back to top button