CrimeKannada NewsKarnataka NewsLatest

*ಅಕ್ರಮ ಸಿಲಿಂಡರ್ ಪತ್ತೆ ಮಾಡಿದ ಮಹಿಳಾ ಅಧಿಕಾರಿ: ಆರೋಪಿಗಳನ್ನು ಬಿಟ್ಟುಬಿಡಿ ಎಂದ ಪ್ರಭಾವಿ*

ಪ್ರಗತಿವಾಹಿನಿ ಸುದ್ದಿ : 350 ಅಕ್ರಮ ಸಿಲಿಂಡರ್ ಗಳನ್ನು ಪತ್ತೆ ಮಾಡಿದ ಮಹಿಳಾಧಿಕಾರಿಯೊಬ್ಬರಿಗೆ ಪ್ರಭಾವಿಯೊಬ್ಬರು ಕರೆ ಮಾಡಿ ಆರೋಪಿಗಳನ್ನು ಬಿಟ್ಟು ಕಳಿಸುವಂತೆ ಸೂಚಿಸಿರುವ ಘಟನೆ ನಡೆದಿದೆ.

ಬೆಂಗಳೂರಿನಲ್ಲಿ ಈ ಘಟನೆ ನಡೆದಿದೆ. ಯಲಹಂಕದ ಹೆಚ್‌ಪಿ ಏಜೆನ್ಸಿಯ ಗೋದಾಮಿನಲ್ಲಿ ಅಕ್ರಮ ನಡೆಯುತ್ತಿತ್ತು. ಈ ಬಗ್ಗೆ ಸ್ಥಳೀಯರು ಆಹಾರ ಸರಬರಾಜು ಇಲಾಖೆಗೆ ದೂರು ನೀಡಿದ್ದರು. ಜನರು ನೀಡಿದ ದೂರನ್ನಾಧರಿಸಿ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ವೇಳೆ 350 ಅಕ್ರಮ ಸಿಲಿಂಡ‌ರ್ ಗಳು ಪತ್ತೆಯಾಗಿತ್ತು. ಅನಿಲ ತುಂಬಿದ ಸಿಲಿಂಡರ್ ಗಳನ್ನು ಗೋದಾಮಿನೊಳಗೆ ಅಡಗಿಸಿಟ್ಟು ಕೃತಕ ಅಭಾವ ಸೃಷ್ಟಿಸಲಾಗುತ್ತಿತ್ತು. ಆಹಾರ ಇಲಾಖೆಯ ಅಧಿಕಾರಿಗಳು ಅಕ್ರಮ ಸಿಲಿಂಡರ್ ಗಳನ್ನು ಜಪ್ತಿ ಮಾಡಿದ್ದರು.

Home add -Advt

ಈ ವೇಳೆ ಪ್ರಭಾವಿ ವ್ಯಕ್ತಿಯೊಬ್ಬರು ಕರೆ ಮಾಡಿ ಆರೋಪಿಗಳನ್ನು ಬಿಟ್ಟುಬಿಡುವಂತೆ ಹಾಗೂ ಸಿಲಿಂಡರ್ ಗಳನ್ನು ಜಪ್ತಿ ಮಾಡದಂತೆ ಸೂಚನೆ ನೀಡಿರುವುದು ವಿವಾದಕ್ಕೆ ಕಾರಣವಾಗಿದೆ. ಈ ಅಕ್ರಮ ಹಿಂದಿರುವ ಕಾಣದ “ಕೈ” ಗಳ ಬಗ್ಗೆ ಚರ್ಚೆಯೂ ಆರಂಭವಾಗಿದೆ. ಮಹಿಳಾಧಿಕಾರಿಗಳೊಡನೆ “ಪ್ರಭಾವಿ” ವ್ಯಕ್ತಿ ಮಾತನಾಡುತ್ತಿರುವ ದೃಶ್ಯ ಹಲವು ಮಾಧ್ಯಮ ವರದಿಗಾರರ ಮೊಬೈಲ್ ನಲ್ಲಿ ದಾಖಲಾಗಿದೆ.

ಈ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗಿದೆ. ಅಧಿಕಾರಿಯ ಬಗ್ಗೆ ಮೆಚ್ಚುಗೆ ಸೂಚಿಸಿರುವ ಜನರು, ಅವರ ಮೇಲೆ ಪ್ರಭಾವ ಬೀರಿರುವ ಭ್ರಷ್ಟ ವ್ಯಕ್ತಿಗಳ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೆ ವಿಡಿಯೋದಲ್ಲಿ ಮಹಿಳಾಧಿಕಾರಿ . ಸರ್ ಒಂದಲ್ಲಾ ಎರಡಲ್ಲಾ 350 ಸಿಲಿಂಡರ್ ಗಳಿವೆ. ಇನ್ನು ಮುಂದೆ ಇಂಥವರನ್ನು ಹಿಡಿಯಲು ಹೇಳಬೇಡಿ ನಮಗೆ ಎಂದು ಕೋಪಗೊಂಡಿರುವುದೂ ಸಹ ದಾಖಲಾಗಿದೆ.

ಪ್ರಭಾವಿ ವ್ಯಕ್ತಿಯ ಬಗ್ಗೆ ತನಿಖೆಯಾಗಲಿ. ಅಕ್ರಮಗಳು ನಿಲ್ಲಲಿ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಆಹಾರ ಇಲಾಖೆ ಸಚಿವರಾದ ಮುನಿಯಪ್ಪನವರೇ ಸ್ವತಃ ಅಧಿಕಾರಿಗಳಿಗೆ ಕರೆ ಮಾಡಿ ಆರೋಪಿಗಳನ್ನು ರಕ್ಷಿಸಿದ್ದಾರೆಂಬ ಆರೋಪ ಕೇಳಿಬಂದಿತ್ತು. ಈ ಕುರಿತು ಪ್ರತಿಕ್ರಿಯಿಸಿರುವ ಮುನಿಯಪ್ಪನವರು, ನನ್ನ ಹೆಸರನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ. ನಾನು ಯಾವ ಅಧಿಕಾರಿಗೂ ಕರೆ ಮಾಡಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಇದೇ ವೇಳೆ ಮಾಧ್ಯಮಗಳಲ್ಲಿ ಈ ಅಕ್ರಮ ಸುದ್ದಿ ಪ್ರಸಾರವಾಗುತ್ತಿದ್ದಂತೆಯೇ ಗೋದಾಮಿನ ಸಿಬ್ಬಂದಿ ಅಕ್ರಮ ಸಿಲಿಂಡರ್ ಗಳನ್ನು ಬೇರೆಡೆಗೆ ಸಾಗಿಸಿದ್ದಾರೆ. ಈ ಕುರಿತು ಯಲಹಂಕ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದರೂ ಸಿಲಿಂಡರ್ ಗಳನ್ನು ರಹಸ್ಯ ಸ್ಥಳಕ್ಕೆ ವರ್ಗಾಯಿಸಲಾಗಿದೆ. 

Related Articles

Back to top button