Kannada NewsKarnataka News
ಚಿರತೆ ದತ್ತು ಸ್ವೀಕರಿಸಿದ ಗುರು ಮೆಟಗುಡ್

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಭೂತರಾಮನಹಟ್ಟಿಯಲ್ಲಿರುವ ಕಿತ್ತೂರು ರಾಣಿ ಚೆನ್ನಮ್ಮ ಕಿರು ಮೃಗಾಲಯದ ಚಿರತೆಯನ್ನು ಬೈಲಹೊಂಗಲದ ಬಿಜೆಪಿ ಯುವ ಮುಖಂಡ ಗುರು ಮೆಟಗುಡ್ಡ ದತ್ತು ಸ್ವೀಕರಿಸಿದರು.
ಉಪ ಅರಣ್ಯ ಸಂರಕ್ಷಣಾಧಿಕಾರಿ ಎಮ್ ವಿ ಅಮರನಾಥ, ವಲಯ ಅರಣ್ಯ ಅಧಿಕಾರಿ ಡಿ. ಶಿವಕುಮಾರ್, ರಾಕೇಶ್ ಅರ್ಜುನವಾಡ, ಪರಿಸರ ಪ್ರೇಮಿ ದಯಾನಂದ ಪರಾಳಶೆಟ್ಟರ್ ಉಪಸ್ಥಿತಿಯಲ್ಲಿ ಗುರು ಮೆಟಗುಡ್ ದತ್ತು ಸ್ವೀಕಾರ ಪ್ರಮಾಣ ಪತ್ರ ಪಡೆದರು.
ಮುಂದಿನ ಒಂದು ವರ್ಷಗಳ ಅವಧಿಗೆ ಚಿರತೆಯನ್ನು ಅವರು ದತ್ತು ಸ್ವೀಕರಿಸಿದ್ದಾರೆ.




