Kannada NewsKarnataka NewsLatest
ಅಪ್ರಾಪ್ತ ಬಾಲಕಿ ಕೊಲೆ ಪ್ರಕರಣ: ರಾಯಬಾಗ ಪೊಲೀಸರಿಂದ ಕಣಕುಂಬಿಯಲ್ಲಿ ತನಿಖೆ

ಪ್ರಗತಿವಾಹಿನಿ ಸುದ್ದಿ, ಖಾನಾಪುರ: ಕಳೆದ ಹಲವು ತಿಂಗಳುಗಳ ಹಿಂದೆ ರಾಯಬಾಗ ತಾಲೂಕಿನಲ್ಲಿ ನಡೆದ ಅಪ್ರಾಪ್ತ ಬಾಲಕಿಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬುಧವಾರ ತಾಲ್ಲೂಕಿನ ಕಣಕುಂಬಿ ಗ್ರಾಮದ ಬಳಿಯ ಅರಣ್ಯ ಪ್ರದೇಶದಲ್ಲಿ ರಾಯಬಾಗ ಪೊಲೀಸರು ತನಿಖೆ ಕೈಗೊಂಡರು.
ಚಿಕ್ಕೋಡಿ ಉಪವಿಭಾಗದ ಎ.ಸಿ, ತಹಸೀಲ್ದಾರ್, ಡಿ.ಎಸ್.ಪಿ ಮತ್ತು ಸಿಪಿಐ ನೇತೃತ್ವದಲ್ಲಿ ಕಣಕುಂಬಿಗೆ ಭೇಟಿ ನೀಡಿದ ರಾಯಬಾಗ ಪೊಲೀಸರು ಮೃತ ಬಾಲಕಿಯ ಮೃತದೇಹವನ್ನು ಸಂಸ್ಕಾರ ನಡೆಸಿದ್ದಾರೆ ಎನ್ನಲಾದ ಸ್ಥಳವನ್ನು ಪರಿಶೀಲಿಸಿದರು ಎಂದು ಮೂಲಗಳು ತಿಳಿಸಿವೆ.




