Belagavi NewsBelgaum News

*ಗೋಕಾಕ್ ತಹಶಿಲ್ದಾರ್ ವಿರುದ್ಧ FIR ದಾಖಲು*

ಪ್ರಗತಿವಾಹಿನಿ ಸುದ್ದಿ: ಗೋಕಾಕ್ ತಹಶಿಲ್ದಾರ್ ಮೋಹನ್ ಭಸ್ಮೆ ವಿರುದ್ಧ ಗೋಕಾಕ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

ಗೋಕಾಕ್ ನ ಮಮದಾಪುರ ಗ್ರಾಮದ ಸಂಗೀತ್ ಬನ್ನೂರ್ ಎನ್ನುವವರಿಗೆ ಸೇರಿದ 20 ಗುಂಟೆ ಜಮೀನನ್ನು ಗುಲಾಬ್ ಒಸ್ವಾಲ್ ಎಂಬಾತನಿಗೆ ಅಕ್ರಮವಾಗಿ ಪರಬಾರೆ ಮಾಡಿಕೊಟ್ಟ ಆರೋಪದಲ್ಲಿ ತಹಶಿಲ್ದಾರ್ ಮೋಹನ್ ಭಸ್ಮೆ ಸೇರಿದಂತೆ ಐವರ ವಿರುದ್ಧ ಪ್ರಕರಣ ದಾಖಲಾಗಿದೆ.

ಸಂಗೀತ್ ಬನ್ನೂರ್ ಅವರಿಗೆ ಸೇರಿದ 4 ಎಕರೆ ಜಮೀನಿನಲ್ಲಿ 20 ಗುಂಟೆ ಜಮೀನನ್ನು ಗುಲಾಬ್ ಒಸ್ವಾಲ್ ಆಮಿಷಕ್ಕೊಳಗಾಗಿ ಆತನ ಹೆಸರಿಗೆ ಪರಬಾರೆ ಮಾಡಿಕೊಟ್ಟಿದ್ದಾರೆ ಎಂದು ದೂರು ದಾಖಲಾಗಿದೆ. ಈ ಹಿನ್ನೆಲೆಯಲ್ಲಿ ಆರೋಪಿ ಗುಲಾಬ್ ಒಸ್ವಾಲ್, ತಹಶಿಲ್ದಾರ್ ಮೋಹನ್ ಭಸ್ಮೆ, ಕಂದಾಯ ನಿರೀಕ್ಷಕ ಎಸ್.ಎಂ.ಹಿರೇಮಠ, ಗ್ರಾಮ ಲೆಕ್ಕಾಧಿಕಾರಿ ತುಕಾರಾಂ, ಲ್ಯಾಂಡ್ ಸರ್ವೇಯರ್ ತಿಮ್ಮಯ್ಯ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.


Home add -Advt

Related Articles

Back to top button