Latest

ವಿಕಲಚೇತನ ಮಹಿಳೆ ಮೇಲೆ ಹಲ್ಲೆ; ಟ್ರಾಫಿಕ್ ASI ಅಮಾನತು

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ವಿಕಲಚೇತನ ಮಹಿಳೆ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಎ ಎಸ್ ಐ ನಾರಾಯಣ್ ಅವರನ್ನು ಅಮಾನತು ಮಾಡಿ ಬೆಂಗಳೂರು ನಗರ ಪೊಲೀಸ್ ಆಯುಕ್ತರು ಆದೇಶ ಹೊರಡಿಸಿದ್ದಾರೆ.

ಹಲಸೂರು ಗೇಟ್ ಬಳಿ ಟೋಯಿಂಗ್ ವಿಚಾರವಾಗಿ ವಿಕಲ ಚೇತನ ಮಹಿಳೆ ಮಂಜುಳಾ, ಟ್ರಾಫಿಕ್ ವಿಭಾಗದ ಎಎಸ್ ಐ ನಾರಾಯಣ್ ಮೇಲೆ ಕಲ್ಲೆಸೆದಿದ್ದರು. ಇದರಿಂದ ಕೋಪಗೊಂಡ ಎ ಎಸ್ ಐ, ಮಹಿಳೆ ಮೇಲೆ ಹಲ್ಲೆ ನಡೆಸಿ ಬೂಟು ಕಾಲಿನಿಂದ ಒದ್ದಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

ಇದೀಗ ಮಹಿಳೆ ಮೇಲೆ ಹಲ್ಲೆ ನಡೆಸಿದ್ದ ಎ ಎಸ್ ಐ ನಾರಾಯಣ್ ಅವರನ್ನು ಅಮಾನತು ಮಾಡಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಆದೇಶ ಹೊರಡಿಸಿದ್ದಾರೆ. ಅಲ್ಲದೇ ಮಹಿಳೆ ಎ ಎಸ್ ಐ ಮೇಲೆ ಕಲ್ಲೆಸೆದ ಪ್ರಕರಣ ಸಂಬಂಧ ಮಹಿಳೆ ಮಂಜುಳಾ ವಿರುದ್ಧ ಎಸ್.ಜೆ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ.

ತಹಶೀಲ್ದಾರ್ ಕಾರು ಚಾಲಕ ಆತ್ಮಹತ್ಯೆ; ಶಿರಸ್ತೇದಾರ್ ಸೇರಿ ಮೂವರ ಬಂಧನ

Home add -Advt

Related Articles

Back to top button