Latest

ಪೊಲೀಸರನ್ನು ಶ್ಲಾಘಿಸುತ್ತಲೇ ಎಚ್ಚರಿಕೆಯನ್ನೂ ನೀಡಿದ ಸಿಎಂ

 

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಲ್ಯಾಂಡ್ ಮಾಫಿಯಾ ಜೊತೆಗೆ ಪೊಲೀಸರು ಶಾಮೀಲಾಗಕೂಡದು. ಹಾಗೆ ಮಾಡಿದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಎಚ್ಚರಿಸಿದ್ದಾರೆ.

ಪೊಲೀಸ್ ಅಧಿಕಾರಿಗಳ ಸಭೆ ನಡೆಸಿದ ನಂತರ ಅವರು ಮಾತನಾಡುತ್ತಿದ್ದರು. ಪೊಲೀಸ್ ಇಲಾಖೆ ಜನಸ್ನೇಹಿಯಾಗಬೇಕು. ಕ್ರೈಂ ಸಂಪೂರ್ಣ ನಿಲ್ಲಬೇಕು. ಕೋವಿಡ್ ಸಂಪೂರ್ಣ ನಿಯಂತ್ರಣಕ್ಕೆ ಬರಬೇಕು. ಇಲಾಖೆಗೆ ಮೂಲಭೂತ ಸೌಲಭ್ಯ ಒದಗಿಸಲಾಗುವುದು. ಪೊಲೀಸರ ಕಲ್ಯಾಣ ಕಾರ್ಯಕ್ರಮ ಇನ್ನಷ್ಟು ಸಬಲೀಕರಣಗೊಳಿಸಲಾಗುವುದು ಎಂದು ತಿಳಿಸಿದರು.

Home add -Advt

ದಕ್ಷ, ಪ್ರಾಮಾಣೀಕ ವ್ಯಕ್ತಿ ಗೃಹಸಚಿವರಾಗಿದ್ದಾರೆ. ಅವರಿಗೆ ಸಾಕಷ್ಟು ಅನುಭವವಿದೆ. ಕಾನೂನು ಸುವ್ಯವಸ್ಥೆ ಸರಕಾರದ ಮೊದಲ ಆದ್ಯತೆ, ನಮ್ಮ ಬದ್ಧತೆ ಎನ್ನುವುದನ್ನು ಖಚಿತಪಡಿಸಲು ಈ ಸಭೆ ನಡೆಸಿದ್ದೇನೆ ಎಂದು ಹೇಳಿದರು.

ಕರ್ನಾಟಕದ ಪೊಲೀಸರು ದಕ್ಷರಿದ್ದಾರೆ. ಪ್ರಾಮಾಣಿಕರಿದ್ದಾರೆ. ಇನ್ನಷ್ಟು ದಕ್ಷತೆ ಹೆಚ್ಚಬೇಕು ಎಂದು ಸೂಚಿಸಲಾಗಿದೆ ಎಂದರು.

ಗೃಹ ಸಚಿವರಾದ ಅರಗ ಜ್ಞಾನೇಂದ್ರ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ ರವಿಕುಮಾರ್,  ಗೃಹ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಡಾ. ರಜನೀಶ್ ಗೋಯಲ್ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ ಸೂದ್ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

 

ಪೊಲೀಸ್ ಇಲಾಖೆಯಲ್ಲಿ ಮಹತ್ತರ ಬದಲಾವಣೆ – ಸಚಿವ ಅರಗ ಜ್ಞಾನೇಂದ್ರ

 

Related Articles

Back to top button