ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಝಾಡಶಹಪುರ ಬಳಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಗಾಯಗೊಂಡ ಯುವಕ ತಂದೆಯ ಕೈ ಮೇಲೇ ಪ್ರಾಣ ಬಿಟ್ಟಿದ್ದಾನೆ.
ಖಾನಾಪುರದ ಶುಭಂ (25) ಎನ್ನುವ ಯುವಕ ತಂದೆಯ ಜೊತೆ ಬೈಕ್ ನಲ್ಲಿ ಬರುತ್ತಿದ್ದಾಗ ಹಿಂದಿನಿಂದ ಕಾರು ಡಿಕ್ಕಿ ಹೊಡೆದಿದೆ. ತೀವ್ರ ಗಾಯಗೊಂಡು ಬಿದ್ದಿದ್ದ ಯುವಕನ ತಲೆಯನ್ನು ತಂದೆ ಎತ್ತಿ ಹಿಡಿದಿದ್ದಾರೆ. ಆದರೆ ಶುಭಂ ಅಲ್ಲೇ ಪ್ರಾಣ ಬಿಟ್ಟಿದ್ದಾನೆ. ಘಟನೆಯಲ್ಲಿ ತಂದೆಯೂ ಗಾಯಗೊಂಡಿದ್ದಾರೆ.
ತಂದೆ-ಮಗ ನಿತ್ಯ ಖಾನಾಪುರದಿಂದ ಬೆಳಗಾವಿಗೆ ಫ್ಯಾಕ್ಟರಿ ಕೆಲಸಕ್ಕೆ ಬರುತ್ತಿದ್ದರು.