Kannada NewsKarnataka NewsLatest

*ತಂದೆಯನ್ನೇ ಸುಪಾರಿ ಕೊಟ್ಟು ಹತ್ಯೆಗೈದ ಮಗ*

ಪ್ರಗತಿವಾಹಿನಿ ಸುದ್ದಿ: ಮಗ ಹಾಗೂ ಸೊಸೆಯೇ ತಂದೆಯನ್ನು ಕೊಲ್ಲಲು ಸುಪಾರಿ ಕೊಟ್ಟು ಹತ್ಯೆ ಮಾಡಿರುವ ಘಟನೆ ಬಾಗಲಕೋಟೆ ಜಿಲ್ಲೆಯ ತಿಮ್ಮಾಪುರ ಗ್ರಾಮದಲ್ಲಿ ನಡೆದಿದೆ.

ಚೆನ್ನಪ್ಪ (66) ಮಗನಿಂದಲೆ ಕೊಲೆಯಾಗಿರುವ ವ್ಯಕ್ತಿ. 37 ಎಕರೆ ಜಮೀನು ಭಾಗದ ವಿಚಾರವಾಗಿ ತಂದೆ ಚೆನ್ನಪ್ಪ ಹಾಗೂ ಮಗ ಚೆನ್ನಬಸಪ್ಪ ನಡುವೆ ಆಗಾಗ ಜಗಳವಾಗುತ್ತಿತ್ತು. ಇದೇ ವಿಚಾರ ತಾರಕಕ್ಕೇರಿದೆ.

Related Articles

ಮಗ ಚೆನ್ನಬಸಪ್ಪ ಹಾಗೂ ಸೊಸೆ ಶಿವಬಸವ್ವ ಇಬ್ಬರೂ ಮಹಾಂತೇಶ್ ಮರಡಿಮಠ ಎಂಬಾತನಿಗೆ 3 ಲಕ್ಷ ರೂಪಾಯಿ ಸುಪಾರಿ ಕೊಟ್ಟು ತಂದೆ ಹತ್ಯೆ ಮಾಡಲು ಹೇಳಿದ್ದಾರೆ. ಅದರಂತೆ ಸುಪಾರಿ ಪಡೆದ ಆತ ನಿನ್ನೆ ರಾತ್ರಿ ರಾಂಪುರ ಗ್ರಾಮದ ಬಳಿ ಚೆನ್ನಪ್ಪನನ್ನು ಬರ್ಬರವಾಗಿ ಕೊಲೆಗೈದಿದ್ದಾನೆ.

ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸರು ತನಿಖೆ ನಡೆಸಿದ್ದು, ಮಗ-ಸೊಸೆಯೇ ಆರೋಪಿಗಳು ಎಂದು ತಿಳಿದುಬಂದಿದೆ.

Home add -Advt

ಪ್ರಕರಣ ಸಂಬಂಧ ಮಗ ಚೆನ್ನಬಸಪ್ಪ, ಸೊಸೆ ಶಿವಬಸವ್ವ, ಮಹಾಂತೇಶ್ ಹಾಗೂ ಚೆನ್ನಪ್ಪ ಆಪ್ತ ರಮೇಶ್ ಸೇರಿ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

Related Articles

Back to top button