Latest

“ಗಡ್ಡ ಬಿಟ್ಟಿದ್ದೇ ತಪ್ಪಾಯ್ತು” ಎಂದ ರಣಬೀರ್ ಕಪೂರ್

ಪ್ರಗತಿವಾಹಿನಿ ಸುದ್ದಿ, ಮುಂಬೈ: ಬಾಲಿವುಡ್ ನಟ ರಣಬೀರ್ ಕಪೂರ್ ತಮ್ಮ ಯಶಸ್ಸಿಗೆ ಅಡ್ಡ ಬಂದ ಗಡ್ಡದ ಬಗ್ಗೆ ಪ್ರಸ್ತಾಪಿಸಿದ್ದಾರೆ. ಬಾಕ್ಸ್ ಆಫೀಸ್ ನಲ್ಲಿ ಗೋತಾ ಹೊಡೆದ ‘ಶಂಶೇರಾ’ ಬಗ್ಗೆ  ಪ್ರತಿಕ್ರಿಯಿಸಿರುವ ಅವರು, ಅದರ ವೈಫಲ್ಯಕ್ಕೆ ಗಡ್ಡವನ್ನೇ ದೂರುತ್ತ, ಚಿತ್ರದಲ್ಲಿ “ಗಡ್ಡ ಬಿಟ್ಟಿದ್ದೇ ದೊಡ್ಡ ತಪ್ಪಾಯ್ತು,” ಎಂದು ವ್ಯಥಿಸಿದ್ದಾರೆ.

ಸೌದಿ ಅರೇಬಿಯಾದಲ್ಲಿ ನಡೆಯುತ್ತಿರುವ ರೆಡ್ ಸೀ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಭಾಗವಹಿಸಿದ್ದ ಅವರು, ಸಂಭಾಷಣೆಯ ಸಮಯದಲ್ಲಿ COVID-19 ರ ನಂತರ ಭಾರತದಲ್ಲಿ ಕೆಲಸ ಮಾಡದ ಚಲನಚಿತ್ರಗಳ ಬಗ್ಗೆ ಸುದೀರ್ಘವಾಗಿ ಮಾತನಾಡಿದರು.

ಅವರ ಚಲನಚಿತ್ರ ‘ಶಂಶೇರಾ’ ತಮ್ಮ ಪಾಲಿಗೆ ದೊಡ್ಡ ದುರಂತ ಎಂದು ಹೇಳಿಕೊಂಡ ರಣಬೀರ್, “ಉರಿ ಬಿಸಿಲಿನಲ್ಲಿ ಶೂಟಿಂಗ್ ಮಾಡುವಾಗ ಗಡ್ಡ ಬಿಟ್ಟುಕೊಂಡರೆ ಮುಖ ಕರಗಿದಂತೆ ಕಾಣುತ್ತದೆ” ಎಂದು ಹೇಳಿದ್ದಾರೆ.

ತಮ್ಮ ಪ್ಯಾಶನ್ ಪ್ರಾಜೆಕ್ಟ್ ಆಗಿದ್ದ ಜಗ್ಗಾ ‘ಜಾಸೂಸ್’ ಹೇಗೆ ಉತ್ತಮವಾಗಿ ಕಾರ್ಯನಿರ್ವಹಿಸಲಿಲ್ಲ ಎಂಬ ಬಗ್ಗೆಯೂ ಅವರು ಮಾತನಾಡಿದರು. “ಇದು ನಾನು ನಿರ್ಮಿಸಿದ ಚಿತ್ರ. ಇದು ಪ್ಯಾಶನ್ ಯೋಜನೆಯಾಗಿತ್ತು. ಇದನ್ನು ಅನುರಾಗ್ ಬಸು ನಿರ್ದೇಶಿಸಿದ್ದಾರೆ. ಇದು ತುಂಬಾ ಹೃದಯಸ್ಪರ್ಶಿ ಮತ್ತು ಮಧುರವಾದ ಕಲ್ಪನೆಯಾಗಿದೆ, ಆದರೆ ಅದು ಉತ್ತಮವಾಗಿ ಕಾರ್ಯನಿರ್ವಹಿಸಲಿಲ್ಲ. ನನ್ನ ವೃತ್ತಿಜೀವನದಲ್ಲಿ ನನಗೆ ನೋವುಂಟು ಮಾಡಿದ ಏಕೈಕ ಚಿತ್ರ ಇದು,” ಎಂದು ಹೇಳಿಕೊಂಡಿದ್ದಾರೆ.

Home add -Advt

‘ಬಯಲು ಶೌಚ ಮುಕ್ತ’ ಮಾಡುವಲ್ಲಿ ರಾಜ್ಯದಲ್ಲಿ ಅಸ್ತಿತ್ವದಲ್ಲಿದ್ದ ಸರ್ಕಾರಗಳು ಮತ್ತು ಇಂದಿನ ಸರ್ಕಾರ ಫೇಲ್

Related Articles

Back to top button