Belagavi NewsBelgaum NewsNational

*ಕುಂಭಮೇಳದಲ್ಲಿ ಕಾಲ್ತುಳಿತ ದುರಂತ: ಬೆಳಗಾವಿಯ ಮತ್ತೋರ್ವ ವ್ಯಕ್ತಿ ಸಾವು*

ಪ್ರಗತಿವಾಹಿನಿ ಸುದ್ದಿ: ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ಮಹಾಕುಂಭಮೇಳದಲ್ಲಿ ಕಾಲ್ತುಳಿತ ದುರಂತ ಸಂಭವಿಸಿಬೆಳಗಾವಿಯ ಮೂವರು ಸಾವನಪ್ಪಿದ್ದಾರೆ.

ಬೆಳಗಾವಿ ಮೂಲದ ತಾಯಿ ಹಾಗೂ ಮಗಳು ಜ್ಯೋತಿ ಹತ್ತರವಾಠ (50) ಪುತ್ರಿ ಮೇಘಾ ಹತ್ತರವಾಠ (25) ಕಾಲ್ತುಳಿತ ದುರಂತದಲ್ಲಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದರು. ಈ ಘಟನೆ ಬೆನ್ನಲ್ಲೇ ಕಾಲ್ತುಳಿದಲ್ಲಿ ಗಾಯಗೊಂಡಿದ್ದ ಬೆಳಗವೈಯ ಮತ್ತೋರ್ವರು ಸಾವನ್ನಪ್ಪಿದ್ದಾರೆ.

ಅರುಣ್ ಕೋಪರ್ಡೆ ಮೃತ ದುರ್ದೈವಿ. ಅವರ ಪತ್ನಿ ಕಾಂಚನಾ ಕೋಪರ್ಡೆ ಗಂಭೀರವಾಗಿ ಗಾಯಗೊಂಡಿದ್ದು ಪ್ರಯಾಗ್ ರಾಜ್ ನಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಬೆಳಗಾವಿ ನಗರದ ಶೆಟ್ಟಿಗಲ್ಲಿ ನಿವಾಸಿ ಅರುಣ್ ಕೋಪರ್ಡೆ ಹಾಗೂ ಕಾಂಚನಾ ದಂಪತಿ ಮೌನಿ ಅಮವಾಸ್ಯೆ ಹಿನ್ನೆಲೆಯಲ್ಲಿ ಮಹಾಕುಂಭ ಮೇಳೆಕ್ಕೆ ತೆರಳಿ ತ್ರುವೇಣಿ ಸಂಗಮದಲ್ಲಿ ಪುಣ್ಯಸ್ನಾನಕ್ಕೆ ತೆರಳುತ್ತಿದ್ದರು. ಈ ವೇಳೆ ಇಂದು ಬೆಳಿಗ್ಗೆ ಭೀಕರ ಕಾಲ್ತುಳಿತ ಸಂಭವಿಸಿದೆ.

Home add -Advt

Related Articles

Back to top button